ಸಿಡಿಲು ಬಡೆದು ಚಡಚಣದಲ್ಲಿ ರೈತ ಸಾವು

257

ಪ್ರಜಾಸ್ತ್ರ ಸುದ್ದಿ

ಚಡಚಣ: ವಿಜಯಪುರ ಜಿಲ್ಲೆಯಲ್ಲಿ ಇಂದು ಮತ್ತೆ ಭರ್ಜರಿ ಮಳೆಯಾಗಿದೆ. ಜಿಲ್ಲೆಯ ಚಡಚಣ ತಾಲೂಕಿನಲ್ಲಿ ಸಿಡಿಲು ಬಡೆದು ರೈತನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಹತ್ತಳ್ಳಿ ಗ್ರಾಮದ 45 ವರ್ಷದ ಧರೆಪ್ಪ ಧರ್ಮಪ್ಪ ಬಿರಾದಾರ ಅನ್ನೋ ರೈತ ಸಾವನ್ನಪ್ಪಿದ್ದಾನೆ.

ಮೇವು ತರಲು ಎತ್ತಿನ ಗಾಡಿಯಲ್ಲಿ ಹೋಗ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ಎತ್ತುಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನು ಜಿಲ್ಲೆಯ ಸಿಂದಗಿ, ಬಸವನಬಾಗೇವಾಡಿ, ದೇವರಹಿಪ್ಪರಗಿ, ಮುಧೋಳ, ಕೊಲ್ಹಾರ ತಾಲೂಕುಗಳಲ್ಲಿ ಮಳೆಯಾಗಿದೆ.




Leave a Reply

Your email address will not be published. Required fields are marked *

error: Content is protected !!