ಇಂತಹ ಪ್ರಕರಣಗಳಿಗೆ ಎನ್ ಕೌಂಟರ್ ಕಾನೂನು ಬರಬೇಕು: ಸಚಿವ ಲಾಡ್

84

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಈ ಸಂಬಂಧ ಅನೇಕ ಮುಖಂಡರು ಮಾತನಾಡಿದ್ದಾರೆ. ನಾನು ಹೆಚ್ಚಿಗೆ ಹೇಳುವುದಿಲ್ಲ. ಆದ್ರೆ, ಇಂತಹ ಪ್ರಕರಣಗಳಿಗೆ ಮುಂದೆ ಎನ್ ಕೌಂಟರ್ ಕಾನೂನು ಬರಬೇಕು ಎಂದರು.

ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಅದರ ಅಂಕೆ, ಸಂಖ್ಯೆ ನೀಡಬಲ್ಲ. ಆದರೆ, ಕೆಲವರು ಇದನ್ನು ರಾಜಕೀಯ ಮಾಡುತ್ತಿದ್ದಾರೆ. ಸೂಕ್ಷ್ಮ ವಿಚಾರದಲ್ಲಿ ಸ್ವಯಂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ತನಿಖೆಯ ಮುಗಿಯುವ ಮೊದಲೇ ರಾಜಕೀಯ ಹೇಳಿಕೆ ನೀಡಬಾರದು. ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ 13 ಲಕ್ಷ ಯುವತಿಯರು, ಮಹಿಳೆಯರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಚಿವೆ ಜೋಶಿಯವರು ಉತ್ತರ ನೀಡಬೇಕು ಅಂದರು.




Leave a Reply

Your email address will not be published. Required fields are marked *

error: Content is protected !!