ಪ್ರಜಾಸ್ತ್ರ ಸುದ್ದಿ
ಹಾಸನ: ಟಿಟಿ ವಾಹನ, ಹಾಲಿನ ವಾಹನ ಹಾಗೂ ಕೆಎಸ್ಆರ್ ಟಿಸಿ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ 9 ಜನರ ದುರ್ಮರಣ ಸಂಭವಿಸಿದ ದಾರುಣ ಘಟನೆ, ಅರಸೀಕೆರೆ ತಾಲೂಕಿನ ಹಳ್ಳಿಕೆರೆ ಗ್ರಾಮದ ಹತ್ತಿರ ನಡೆದಿದೆ. ಊರು ತಲುಪಲು ಎರಡ್ಮೂರು ನಿಮಿಷ ಇರುವಾಗಲೇ ದುರಂತ ನಡೆದಿದೆ.
ಹಳ್ಳಿಕೆರೆ ಗ್ರಾಮದ 14 ಮಂದಿ ಟಿಟಿ ವಾಹನದ ಮೂಲಕ ಧರ್ಮಸ್ಥಳಕ್ಕೆ ತೆರಳಿ ದರ್ಶನ ಪಡೆದು, ನಂತರ ಹಾಸನಾಂಬೆ ದರ್ಶನ ಪಡೆದು ಊರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಮನೆ ಸೇರಲು ಇನ್ನು ಐದಾರು ನಿಮಿಷ ಇರುವಾಗಲೇ ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅಪಘಾತವಾಗಿದೆ.
ಹಾಲಿನ ವಾಹನ ಚಾಲಕನಿಗೆ ತಿರುವು ಗೊತ್ತಾಗಿದೆ ಏಕಮುಖವಾಗಿ ಬರುತ್ತಿದ್ದ ಗಾಡಿಗಳ ಕಡೆ ಬಂದಿದೆ. ಇದರಿಂದಾಗಿ ಟಿಟಿ ವಾಹನ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಹಿಂದೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗೂ ಡಿಕ್ಕಿಯಾಗಿದೆ. ಹೀಗಾಗಿ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡ 12ಕ್ಕೂ ಹೆಚ್ಚು ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.