ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮದವರು, ದುಡಿಮೆಗಾಗಿ ನೆರೆಯ ಮಹಾರಾಷ್ಟ್ರದ ರತ್ನಗಿರಿಗೆ ಹೋಗಿದ್ರು. ಕರೋನಾ ಲಾಕ್ ಡೌನ್ ನಿಂದಾಗಿ ಅಲ್ಲಿ ಸಿಕ್ಕಿಹಾಕಿಕೊಂಡು ಸಾಕಷ್ಟು ಹೈರಾಣು ಆಗಿದ್ರು. ಇದೀಗ ಅವರ ನೆರವಿಗೆ ಜಿ.ಆರ್ ಗ್ರೂಪ್ ಮುಖ್ಯಸ್ಥರಾದ ಶಿವಾನಂದ ಪಾಟೀಲ ಸೋಮಜಾಳ ಅವರು ಬಂದಿದ್ದಾರೆ.
ಸುಮಾರು 30 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವ ಮೂಲಕ, ರತ್ನಗಿರಿಯಿಂದ ಸ್ವಗ್ರಾಮವಾದ ಕನ್ನೊಳ್ಳಿಗೆ ಬರಲು ಸಹಾಯ ಮಾಡಿದ್ದಾರೆ. ಹೀಗಾಗಿ ಶಿವಾನಂದ ಪಾಟೀಲ ಸೋಮಜಾಳ ಅವರಿಗೆ ಸುಮಾರು 15ಕ್ಕೆ ಹೆಚ್ಚು ವಲಸೆ ಕಾರ್ಮಿಕರು ಧನ್ಯವಾದಗಳನ್ನ ಸಲ್ಲಿಸಿದ್ದಾರೆ.