ವಲಸೆ ಕಾರ್ಮಿಕರನ್ನ ತವರಿಗೆ ಕಳುಹಿಸಲು 15 ದಿನ ಡೆಡ್ ಲೈನ್

327

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲಾಕ್ ಡೌನ್ ಬಳಿಕ ಸಿಲುಕಿಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನ ಅವರವರ ತವರು ರಾಜ್ಯಗಳಿಗೆ ಕಳುಹಿಸಲು ಸುಪ್ರೀಂ ಕೋರ್ಟ್ ಡೆಡ್ ಲೈನ್ ನೀಡಿದೆ. 15 ದಿನಗಳೊಳಗೆ ಅವರಿಗೆ ಅವರ ರಾಜ್ಯಗಳಿಗೆ ಕಳುಹಿಸಿ ಎಂದು ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ ಭೂಷಣ, ಎಸ್.ಕೆ ಕೌಲ್ ಹಾಗೂ ಎಂ.ಆರ್ ಅವರಿದ್ದ ತ್ರೀಸದಸ್ಯ ಪೀಠ ಆದೇಶಿಸಿದೆ. ನೋಂದಣಿಯಿದ್ದ ವಲಸಿಗರನ್ನ ಕಳುಹಿಸಲು 15 ದಿನ ಸಮಯ ಸಾಕಾಗುತ್ತೆ ಎಂದಿರುವ ಪೀಠ, ಸಂಪೂರ್ಣ ಆದೇಶವನ್ನ ಮುಂದಿನ ಮಂಗಳವಾರ ರಿಲೀಸ್ ಮಾಡಲಿದೆ.

ಈಗಾಗ್ಲೇ 1 ಕೋಟಿ ಕಾರ್ಮಿಕರನ್ನ ಸಾಗಿಸಲಾಗಿದೆ. ರಸ್ತೆ ಮೂಲಕ 41 ಲಕ್ಷ, ರೈಲು ಮೂಲಕ 57 ಲಕ್ಷ ಕಾರ್ಮಿಕರನ್ನ ಕಳುಹಿಸಲಾಗಿದೆ. ಇನ್ನು 2 ಲಕ್ಷ ಜನ ಕಾರ್ಮಿಕರು ದೆಹಲಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಆಯಾ ರಾಜ್ಯಗಳು ತಮ್ಮಲ್ಲಿರುವ ವಲಸೆ ಕಾರ್ಮಿಕರನ್ನ ಕಳುಹಿಸಲು ಸೂಚಿಸಿದೆ.




Leave a Reply

Your email address will not be published. Required fields are marked *

error: Content is protected !!