ಕಸಾಪ-ಜಿ.ಆರ್ ಗ್ರೂಪ್ ಸಹಯೋಗದಲ್ಲಿ ಪರಿಸರ ದಿನಾಚರಣೆ

449

ಸಿಂದಗಿ: ಪಟ್ಟಣದ ವಿದ್ಯಾನಗರ 1ನೇ ಕ್ರಾಸ್ ಉದ್ಯಾನವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿ.ಆರ್ ಗ್ರೂಪ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯ್ತು. ಜಿ.ಆರ್ ಗ್ರೂಪ್ ಅಧ್ಯಕ್ಷ ಶಿವಾನಂದ ಪಾಟೀಲ ಸೋಮಜಾಳ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಸಾಪ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮಾತ್ನಾಡಿ, ಪರಿಸರ ದಿನಾಚರಣೆ ನಿತ್ಯ ನಿರಂತರವಾಗಿರಲಿ. 1972ರಲ್ಲಿ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಣೆ ಬಗ್ಗೆ ನಿರ್ಧರಿಸಿ, 1973, ಜೂನ 5ರಂದು ಪ್ರಾರಂಭಿಸಲಾಯ್ತು. ಪರಿಸರ ನಮ್ಮೆಲ್ಲರ ಜೀವನಾಡಿ. ಆದ್ರೆ, ಕಾಡು ನಾಶವಾಗುತ್ತಿದೆ. ಪರಿಸರ ಹದಿಗೆಡುತ್ತದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಜವಾಬ್ದಾರಿಯಿಂದ ಸಾಗಬೇಕಾಗಿದೆ ಎಂದರು.

ಈ ವೇಳೆ ಪುರಸಭೆ ಸದಸ್ಯೆ ಪ್ರತಿಭಾ ಕಲ್ಲೂರ, ಪ್ರಶಾಂತಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಮಲ್ಲು ಬಿರಾದಾರ, ಮಾಹಾಂತೇಶ ನೂಲಾನವರ, ಡಾ.ಪ್ರಕಾಶ ರಾಗರಂಜಿನಿ, ಶಿವಕುಮಾರ ಕಲ್ಲೂರ, ಪರಮಾನಂದ ಬಗಲಿ, ಅಶೋಕ ಬಿರಾದಾರ, ಬಸವರಾಜ ಅಗಸರ, ಗುಂಡಣ್ಣ ಕುಂಬಾರ, ಮನೋಹರ ಬಿರಾದಾರ, ರಮೇಶ ಹೆಬ್ಬಾಳ,  ಸೇರಿದಂತೆ ಅನೇಕರಿದ್ದರು.




Leave a Reply

Your email address will not be published. Required fields are marked *

error: Content is protected !!