ಪ್ರಜಾಸ್ತ್ರ ಸುದ್ದಿ
ಗುವಾಹಟಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣ ದೇಶ್ಯಾದ್ಯಾಂತ ಚರ್ಚೆಯಾಗುತ್ತಿದೆ. ಲೋಕಸಭಾ ಚುನಾವಣೆ ರ್ಯಾಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಿಲುವು ಸ್ಪಷ್ಟವಾಗಿದೆ. ನಾವು ಮಾತೃಶಕ್ತಿ ಪರವಾಗಿದ್ದೇವೆ ಎಂದಿದ್ದಾರೆ.
ನಾನು ಕಾಂಗ್ರೆಸ್ಸಿಗೆ ಕೇಳುತ್ತೇನೆ. ಅಲ್ಲಿ ಯಾರ ಸರ್ಕಾರವಿದೆ? ಅವರೇಕೆ ಇಲ್ಲಿಯ ತನಕ ಕ್ರಮ ತೆಗೆದುಕೊಂಡಿಲ್ಲ. ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ಪ್ರಶ್ನೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ನಾವು ತನಿಖೆ ಪರ ಇದ್ದೇವೆ. ನಮ್ಮ ಮಿತ್ರಪಕ್ಷ ಜೆಡಿಎಸ್ ಸಹ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ ಅಂತಾ ಹೇಳಿದರು.