ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟಿ-20 ವಿಶ್ವಕಪ್ ಟೂರ್ನಿಗಾಗಿ ಬಿಸಿಸಿಐ ಮಂಗಳವಾರ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಸಜ್ಜಾಗಿದೆ.
ಯುವ ಆಟಗಾರ ಯಶಸ್ವಿ ಜೈಸ್ವಾಲ್ ಗೆ ಅವಕಾಶ ಸಿಕ್ಕಿದೆ. ಅನುಭವಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಇದ್ದಾರೆ. ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಹಾಗೂ ಸಂಜು ಸ್ಯಾನ್ಸ್ ಈ ಇಬ್ಬರು ವಿಕೆಟ್ ಕೀಪರ್ ಆಯ್ಕೆ ಮಾಡಲಾಗಿದೆ.
ಹಾರ್ದಿಕ್ ಪಾಂಡೆ(ಉಪ ನಾಯಕ), ಶಿವಂ ದುಬೆಗೆ ಅವಕಾಶ ಸಿಕ್ಕಿದೆ. ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಾಹಲ್ ಕಂ ಬ್ಯಾಕ್ ಆಗಿದ್ದಾರೆ. ಆರ್ಶದೀಪ್ ಸಿಂಗ್, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ 15 ಆಟಗಾರರ ಲಿಸ್ಟ್ ನಲ್ಲಿದ್ದಾರೆ.
ಶುಭಮನ್ ಗಿಲ್, ಖಲೀಲ್ ಅಹ್ಮದ್, ಆವೇಶ್ ಖಾನ್, ರಿಂಕು ಸಿಂಗ್ ಮೀಸಲು ಆಟಗಾರರಾಗಿದ್ದಾರೆ. ಇನ್ನು ಕನ್ನಡಿಗ ಕೆ.ಎಲ್ ರಾಹುಲ್ ಅವಕಾಶ ವಂಚಿತರಾಗಿದ್ದಾರೆ. ಒಳ್ಳೆಯ ಫಾರ್ಮ್ ನಲ್ಲಿರುವ ಕೆ.ಎಲ್ ರಾಹುಲ್ ಆಯ್ಕೆ ಸಮಿತಿ ಕೈ ಬಿಟ್ಟಿದೆ. ಇನ್ನು ಹಿರಿಯ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಆಯ್ಕೆ ಆಗುವ ನಿರೀಕ್ಷೆ ಇತ್ತು. ಇದು ಸುಳ್ಳಾಗಿದೆ.