ಪ್ರಜಾಸ್ತ್ರ ಸುದ್ದಿ
ಅಥಣಿ: ತಾಲೂಕಿನ ಹಲ್ಯಾಳ ಗ್ರಾಮದ ಸದಾಶಿವ ಮುತ್ಯಾ ದೇವಸ್ಥಾನದ ಆವರಣದಲ್ಲಿ ಹಾಗೂ ಇಲ್ಲಿನ ಜನವಸತಿ ಪ್ರದೇಶಗಳಲ್ಲಿ ಮಳೆ ನೀರು ನಿಂತುಕೊಳ್ಳುತಿತ್ತು. ಇದ್ರಿಂದಾಗಿ ಕೊಳಚೆ ನಿರ್ಮಾಣವಾಗಿ ರೋಗರುಜಿನಗಳಿಗೆ ಕಾರಣವಾಗಿತ್ತು. ಅಲ್ದೇ, ಸಾರ್ವಜನಿಕರಿಗೆ ನಿತ್ಯ ಸಂಚರಿಸಲು ತೊಂದರೆಯಾಗ್ತಿತ್ತು. ಈ ಬಗ್ಗೆ ‘ಪ್ರಜಾಸ್ತ್ರ’ದಲ್ಲಿ ವರದಿ ಮಾಡಲಾಗಿತ್ತು.
ಪ್ರಜಾಸ್ತ್ರ ವರದಿಯಿಂದ ಎಚ್ಚೆತ್ತುಕೊಂಡ ವಾರ್ಡ್ ಸದಸ್ಯ ಮುದಕಣ್ಣ ಶೇಗುಣಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಳಿಕ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ರಸ್ತೆ ಕಾರ್ಯ ಶುರು ಮಾಡಿ, ಬಿದ್ದ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ರು. ಅಲ್ದೇ, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಿದ್ರು.
ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದ್ರೂ ಯಾರೂ ಕ್ಯಾರೆ ಅಂದಿರ್ಲಿಲ್ಲ. ಸುದ್ದಿ ಬಂದ್ಮೇಲೆ ಸದಸ್ಯರೆ ಮುಂದೆ ನಿಂತು ಕೆಲಸ ಮಾಡಿದ್ದಾರೆ. ಈ ವೇಳೆ ಮಹಾದೇವ ಬಿಸಲನಾಯಿಕ, ಸುರೇಶ ಜಾಧವ, ಸುನೀಲ ಇಂಗಳಿ, ಅಪ್ಪಾಸಾಬ ಖೋತ, ಪ್ರಕಾಶ ವಾಡೇದ, ಬಸವರಾಜ ಸತ್ತಿ, ಸುಭಾಷ ನಾವಿ ಸೇರಿದಂತೆ ಅನೇಕರಿದ್ದರು.