ಪ್ರಜಾಸ್ತ್ರ ಸುದ್ದಿ
ಅಥಣಿ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಆಚರಿಸಲಾಯಿತು. ನ್ಯಾಯವಾದಿ ಸಂಜೀವ ಕಾಂಬಳೆ ಅವರು ಅಂಬೇಡ್ಕರ್ ಅವರ ಫೋಟೋಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಶಿಕ್ಷಕಿ ರೇಖಾ ಕಾಂಬಳೆ, ರಾಜು ಕಾಂಬಳೆ, ರವಿ, ವಿಠ್ಠಲ, ಸುನೀಲ, ನಿಖಿಲ, ಜ್ಞಾನದೇವ ಸೇರಿ ಅನೇಕರು ಉಪಸ್ಥಿತರಿದ್ದರು.
ಇನ್ನು ಧಾರವಾಡದಲ್ಲಿ ಪತ್ರಕರ್ತರು ಅಂಬೇಡ್ಕರ್ ಅವರ 132ನೇ ಜಯಂತಿ ಆಚರಿಸಿದರು. ಪತ್ರಕರ್ತ ರಾಜು ಕಾಂಬಳೆ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜಪ್ಪ ಮಾದರ, ಶಿವರಾಜ ಕಾಂಬಳೆ, ಸಚಿನ್ ಪಾಟೀಲ, ಅಶೋಕ ರಾಠೋಡ, ಜಯರಾಜ ಹುಣಸಿಮರದ ಸೇರಿ ಅನೇಕರಿದ್ದರು.