ಪ್ರಜಾಸ್ತ್ರ ಸುದ್ದಿ
ಧಾರವಾಡ: ಜಿಲ್ಲೆಯ ಇಟ್ಟಿಗಟ್ಟಿ ಬಳಿ ನಡೆದ ಟಿಪ್ಪರ್, ಟ್ರಾವಲರ್ ಟೆಂಪೋ ನಡುವಿನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಚಾಲಕ ಸಹ ಸಾವನ್ನಪ್ಪಿದ್ದಾನೆ. ಹೀಗೆ ಮೃತಪಟ್ಟ ಮಹಿಳೆಯರೆಲ್ಲ ವೈದ್ಯರು. ದಾವಣಗೆರೆ ಮೂಲದ ವೈದ್ಯರು ಹಾಗೂ ವೈದ್ಯರ ಪತ್ನಿಯರ ಸ್ನೇಹಬಳಗವಿದು.
ಈ ದುರಂತದಲ್ಲಿ ಬಿಜೆಪಿ ಮಾಜಿ ಶಾಸಕ ಗುರುಸಿದ್ಧಗೌಡರ ಮಗ ಡಾ. ರವಿಕುಮಾರ ಪತ್ನಿ ಪ್ರೀತಿ ಹಾಗೂ ಡಾ.ಪ್ರಕಾಶ ಮತ್ತಿಹಳ್ಳಿ ಪತ್ನಿ ಡಾ.ವೀಣಾ ಪ್ರಕಾಶ ಸೇರಿದ್ದಾರೆ. ಮಹಿಳಾ ವೈದ್ಯರು ಹಾಗೂ ವೈದ್ಯರ ಪತ್ನಿಯರ ಟೀಂ ಆಗಾಗ ಪ್ರವಾಸಕ್ಕೆ ಹೋಗ್ತಿತ್ತು. ಅದೇ ರೀತಿ ಶುಕ್ರವಾರ ಬೆಳಗ್ಗೆ 3 ಗಂಟೆಗೆ ದಾವಣಗೆರೆಯಿಂದ ಗೋವಾಗೆ ಹೊರಟಿದ್ರು.
ಎಂದಿನಂತೆ ಖುಷಿ ಖುಷಿಯಾಗಿ ಹೊರಟ್ಟಿದ್ದ ಇವರಿಗೆ ಈ ಬಾರಿ ಮಾತ್ರ ಯಾರೂ ಊಹಿಸಲು ಆಗದಂತಹ ದುರ್ಘಟನೆ ನಡೆಯುತ್ತೆ ಅನ್ನೋ ಕಲ್ಪನೆ ಸಹ ಇರ್ಲಿಲ್ಲ. ಹೀಗಾಗಿ ಧಾರವಾಡದ ಇಟ್ಟಿಗಟ್ಟಿ ಬೈಪಾಸ್ ಬಳಿ ಬೆಳಗ್ಗೆ 7.30ರ ಸುಮಾರಿಗೆ ಬರ್ತಿದ್ದಾಗ ಮರಳು ಸಾಗಿಸುವ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ.
ಭೀಕರ ಅಪಘಾತದಲ್ಲಿ 16 ಜನ ಮಹಿಳೆಯರಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಅಲ್ದೇ, ರಾಣೇಬೆನ್ನೂರು ಮೂಲದ ಚಾಲಕ 26 ವರ್ಷದ ಮಲ್ಲಿಕಾರ್ಜುನ ಸಹ ಸಾವನ್ನಪ್ಪಿದ್ದಾನೆ. ಹೀಗೆ 13 ಅಮಾಯಕ ಜೀವಗಳು ಬಲಿಯಾಗಿವೆ. ಈ ದುರಂತದ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.