ಚಂದಿಗಢ: ಹರಿಯಾಣದಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದಿರುವ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ನೋಡ್ತಿದೆ. ಇದರ ನಡುವೆ ಇಂದೆ ರಾಜ್ಯಪಾಲ ಸತ್ಯದೇವ ನಾರಾಯಣ ಅವರನ್ನ ಸಿಎಂ ಮನೋಹರ ಲಾಲ್ ಖಟ್ಟರ್ ಭೇಟಿ ಮಾಡ್ತಿದ್ದಾರೆ.
ಲೋಕಾಹಿತ ಪಕ್ಷದ ಮುಖಂಡ ಗೋಪಾಲ ಖಂಡ, ಪಕ್ಷೇತರ ಶಾಸಕ ರಂಜಿತ ಸಿಂಗ್ ಬಿಜೆಪಿಗೆ ಬೇಷರತ್ ಬೆಂಬಲ ನೀಡಲು ಒಪ್ಪಿಕೊಂಡಿದ್ದಾರೆ. ಈಗಾಗ್ಲೇ ದೆಹಲಿಗೆ ತೆರಳಿರುವ ಖಟ್ಟರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಸೇರಿದಂತೆ ಪಕ್ಷೇತರ ಶಾಸಕರನ್ನ ಭೇಟಿ ಮಾಡಿ ಮಾತ್ನಾಡಲಿದ್ದಾರೆ.
40 ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿಗೆ ಇನ್ನು 5 ಜನ ಶಾಸಕರ ಸಂಖ್ಯಾಬಲಬೇಕಿದೆ. ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಪ್ಲಾನ್ ಮಾಡ್ತಿದೆ. ಇದು ಸಕ್ಸಸ್ ಆಗುವ ಸಾಧ್ಯತೆಯಿದೆ. ಯಾಕಂದ್ರೆ, ಕಾಂಗ್ರೆಸ್ 31 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು 14 ಶಾಸಕರ ಸಂಖ್ಯೆ ಬೇಕು. ಬಿಜೆಪಿಗೆ 5 ಶಾಸಕರು ಬೇಕು. 18 ಜನ ಪಕ್ಷೇತರರು ಗೆದ್ದಿದ್ದು ಬಿಜೆಪಿ ಪರ ವಾಲುವ ಸಾಧ್ಯತೆಯಿದೆ.