ಪೊಲೀಸ್ ಜೀಪ್ ಮೇಲೆ ಪಟಾಕಿ ಹಚ್ಚಿದ ‘ಇಳಯ ದಳಪತಿ’ ಫ್ಯಾನ್ಸ್

655

ತಮಿಳಿನ ಸೂಪರ್ ಸ್ಟಾರ್ ನಟ ಇಳಯ ದಳಪತಿ ವಿಜಯ ಫ್ಯಾನ್ಸ್ ಗಲಾಟೆ ಮಾಡಿದ್ದಾರೆ. ತಮಿಳುನಾಡಿನ ಹೊಸೂರಿನಲ್ಲಿ ಚಿತ್ರ ಪದರ್ಶನ ಮಾಡದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಕಲ್ಲು ತೂರಾಟ ನಡೆಸಿದ್ದಾರೆ.

ವಿಜಯ ನಟನೆಯ ಬಿಗಲ್ ಮೂವಿ ರಿಲೀಸ್ ಆಗಿದೆ. ಸಿನಿಮಾ ಪ್ರದರ್ಶನಕ್ಕೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿತ್ತು. ಟಿಕೆಟ್ ಸಹ ಹಂಚಿಕೆ ಮಾಡಲಾಗಿತ್ತು. ಆದ್ರೆ, ಅದೇನೋ ಆಗಿದೆಯೋ ಗೊತ್ತಿಲ್ಲ. ಕೊನೆ ಕ್ಷಣದಲ್ಲಿ ಚಿತ್ರ ಪ್ರದರ್ಶನ ಮಾಡಿಲ್ಲ. ಇದ್ರಿಂದ ರೊಚ್ಚಿಗೆದ್ದ ಅಭಿಮಾನಿಗಳು ಥಿಯೇಟರ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸ್ ಜೀಪ್ ಮೇಲೆ ಪಟಾಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!