ನವದೆಹಲಿ: ಅನರ್ಹ 15 ಜನ ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆ ಇನ್ನು ಕೆಲವೇ ಕ್ಷಣಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅನರ್ಹ ಶಾಸಕರ ಎದೆಯಲ್ಲಿ ಢವಢವ ಶುರುವಾಗಿದೆ. ಹಿರಿಯ ವಕೀಲ ಮುಕಲ ರೋಹ್ಟಗಿ ಅನರ್ಹರ ಪರವಾಗಿ ವಾದ ಮಾಡ್ತಿದ್ದಾರೆ.
ಇದರ ನಡುವೆ ಚುನಾವಣೆಗೆ ನಿಲ್ಲಲು ಅವಕಾಶ ಕೊಡಬೇಕೆಂದು ಸಹ ಕೇಳಲಾಗಿದೆ ಅಂತಾ ಹೇಳಲಾಗ್ತಿದೆ. ಯಾಕಂದ್ರೆ, ಈಗಾಗ್ಲೇ ಅಕ್ಟೋಬರ್ 21ಕ್ಕೆ ಉಪ ಚುನಾವಣೆ ಘೋಷಣೆ ಮಾಡಿಯಾಗಿದೆ. ಆದ್ರಿಂದ ತಮ್ಗೆ ಚುನಾವಣೆಗೆ ಅವಕಾಶ ಕೊಡಿ ಎಂದು ಕೇಳುವ ಸಾಧ್ಯತೆಯಿದೆ.