ಡಿ ಬಾಸ್ ನೆಚ್ಚಿನ ಕಾಳಮ್ಮನ ಕೊಪ್ಪಲು ಬಸವ ಇನ್ನಿಲ್ಲ

630

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ದುನಿಯಾದ ಡಿ ಬಾಸ್ ದರ್ಶನ ನೆಚ್ಚಿನ ಬಸವ ಸಾವನ್ನಪ್ಪಿದೆ. ಮಂಡ್ಯದ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಅಲ್ದೇ, ಅನ್ನ, ನೀರು ಸಹ ಮುಟ್ಟದೆ ಉಳಿದಿತ್ತು. ಅದು ಇದೀಗ ಸಾವನ್ನಪ್ಪಿದೆ.

ಈ ಬಸವ ಸುದ್ದಿಯಾಗಿದ್ದು, ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಟೈಂನಲ್ಲಿ. ಸುಮಲತಾ ಅಂಬರೀಶ ಅವರ ಪರವಾಗಿ ಚುನಾವಣೆ ಪ್ರಚಾರದಲ್ಲಿ ದರ್ಶನ ಭಾಗವಹಿಸಿದ್ರು. ಈ ವೇಳೆ ಕೆ.ಆರ್ ನಗರದ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿನ ಈ ಬಸವ ರಸ್ತೆಗೆ ಅಡ್ಡಲಾಗಿ ನಿಂತು, ಯಾರಿಗೆ ದಾರಿ ಬಿಡುತ್ತಿರಲಿಲ್ಲ. ದರ್ಶನ ಗಾಡಿಯಿಂದ ಕೆಳಗೆ ಇಳಿದು ಅದರ ಮೈ ಸವರಿ ದಾರಿ ಬಿಡುವಂತೆ ಮಾಡಿದ್ರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ಬಸವನ ಅನಾರೋಗ್ಯದ ಬಗ್ಗೆ ತಿಳಿದ ದರ್ಶನ ಅದರ ಚಿಕಿತ್ಸೆಗೆ ಮುಂದಾಗಿದ್ರು. ಮೈಸೂರು ಪಶುವೈದ್ಯರನ್ನ ಸಂಪರ್ಕಿಸಿ ಅದಕ್ಕೆ ಚಿಕಿತ್ಸೆ ನೀಡಲು ಸೂಚಿಸಿದ್ರು. ಆದ್ರೆ, ಚಿಕಿತ್ಸೆ ಫಲಿಸದೆ ಕಾಳಮ್ಮನ ದೇವಾಲಯದ ಆವರಣದಲ್ಲಿ ಬಸವ ಸಾವನ್ನಪ್ಪಿದೆ.




Leave a Reply

Your email address will not be published. Required fields are marked *

error: Content is protected !!