ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ದುನಿಯಾದ ಡಿ ಬಾಸ್ ದರ್ಶನ ನೆಚ್ಚಿನ ಬಸವ ಸಾವನ್ನಪ್ಪಿದೆ. ಮಂಡ್ಯದ ಕಾಳಮ್ಮನ ಕೊಪ್ಪಲು ಗ್ರಾಮದ ಬಸವ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಅಲ್ದೇ, ಅನ್ನ, ನೀರು ಸಹ ಮುಟ್ಟದೆ ಉಳಿದಿತ್ತು. ಅದು ಇದೀಗ ಸಾವನ್ನಪ್ಪಿದೆ.
ಈ ಬಸವ ಸುದ್ದಿಯಾಗಿದ್ದು, ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಟೈಂನಲ್ಲಿ. ಸುಮಲತಾ ಅಂಬರೀಶ ಅವರ ಪರವಾಗಿ ಚುನಾವಣೆ ಪ್ರಚಾರದಲ್ಲಿ ದರ್ಶನ ಭಾಗವಹಿಸಿದ್ರು. ಈ ವೇಳೆ ಕೆ.ಆರ್ ನಗರದ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿನ ಈ ಬಸವ ರಸ್ತೆಗೆ ಅಡ್ಡಲಾಗಿ ನಿಂತು, ಯಾರಿಗೆ ದಾರಿ ಬಿಡುತ್ತಿರಲಿಲ್ಲ. ದರ್ಶನ ಗಾಡಿಯಿಂದ ಕೆಳಗೆ ಇಳಿದು ಅದರ ಮೈ ಸವರಿ ದಾರಿ ಬಿಡುವಂತೆ ಮಾಡಿದ್ರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.
ಬಸವನ ಅನಾರೋಗ್ಯದ ಬಗ್ಗೆ ತಿಳಿದ ದರ್ಶನ ಅದರ ಚಿಕಿತ್ಸೆಗೆ ಮುಂದಾಗಿದ್ರು. ಮೈಸೂರು ಪಶುವೈದ್ಯರನ್ನ ಸಂಪರ್ಕಿಸಿ ಅದಕ್ಕೆ ಚಿಕಿತ್ಸೆ ನೀಡಲು ಸೂಚಿಸಿದ್ರು. ಆದ್ರೆ, ಚಿಕಿತ್ಸೆ ಫಲಿಸದೆ ಕಾಳಮ್ಮನ ದೇವಾಲಯದ ಆವರಣದಲ್ಲಿ ಬಸವ ಸಾವನ್ನಪ್ಪಿದೆ.