ಚಂದನವನದಲ್ಲಿ ‘ಮಾದಕ’ತೆ: ಡಿ ಬಾಸ್ ಏನಂದ್ರು?

328

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದಾವಣಗೆರೆ: ಸ್ಯಾಂಡಲ್ ವುಡ್ ನಲ್ಲಿ ಇದೀಗ ಬರೀ ಡ್ರಗ್ಸ್ ಮಾಫಿಯಾದ ಚರ್ಚೆ ನಡೆಯುತ್ತಿದೆ. ಅದರಲ್ಲೂ ಇಂದ್ರಜೀತ ಲಂಕೇಶ ಅವರು ನೀಡಿದ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ಡಿ ಬಾಸ್ ಪ್ರತಿಕ್ರಿಯೆ ನೀಡಿದ್ದು, ಈಗ ಕೇಳಿ ಬರ್ತಿರುವ ಆರೋಪ ಬರಿ ಸ್ಯಾಂಡಲ್ ವುಡ್ ಗೆ ಅಲ್ಲ. ಇಡೀ ಕರ್ನಾಟಕಕ್ಕೆ ಕಳಂಕ ಎಂದಿದ್ದಾರೆ.

ಒಂದು ಕ್ಲಾಸ್ ಅಂದ್ಮೇಲೆ ರ್ಯಾಂಕ್ ಸ್ಟೂಡೆಂಟ್, ಝೀರೋ ಸ್ಟೂಡೆಂಟ್ ಇರ್ತಾರೆ. ಹಾಗಂತ ಇಡೀ ಕ್ಲಾಸ್ ಝೀರೋ ಎನ್ನಲಾಗುತ್ತಾ ಎಂದಿರುವ ನಟ ದರ್ಶನ, ಸತ್ತವರು ಯಾರೆ ಆಗಿರಲಿ ಅವರ ಬಗ್ಗೆ ಕೆಟ್ಟದಾಗಿ ಮಾತ್ನಾಡಬಾರದು ಎಂದು ನಮ್ಮ ತಂದೆ ಹೇಳುವವರು. ಒಂದು ವೇಳೆ ಆರೋಪ ಪ್ರೂವ್ ಆದ್ರೆ, ಅವರನ್ನ ಕರೆದುಕೊಂಡು ಬಂದು ಶಿಕ್ಷೆ ಕೊಡಲು ಆಗುತ್ತಾ ಎಂದು ಮರುಪ್ರಶ್ನೆ ಹಾಕಿದ್ರು.

ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಬಳಿಯಿರುವ ಕುದುರೆ ತೆಗೆದುಕೊಂಡು ಹೋಗಲು ದಾವಣಗೆರೆಗೆ ಬಂದಿದ್ರು. ಈ ವೇಳೆ ಮಾಧ್ಯಮದವರಿಗೆ ಸಿಕ್ಕು, ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ಮಾಫಿಯಾ ಕುರಿತು ಪ್ರತಿಕ್ರಿಯೆ ನೀಡಿದ್ರು.




Leave a Reply

Your email address will not be published. Required fields are marked *

error: Content is protected !!