ಸಂಗೀತ ನಿರ್ದೇಶಕ ಅರ್ಜುನ ಜನ್ಯಗೆ ಲಘು ಹೃದಯಾಘಾತ

604

ಮೈಸೂರು: ಕನ್ನಡ ಸಿನಿ ರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರಿಗೆ ಹೃದಯಾಘಾತವಾಗಿತ್ತು. ಈ ಬಗ್ಗೆ ಅಪೋಲೋ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದು, ಇಸಿಜಿಯಲ್ಲಿ ಬಹಳ ವ್ಯತ್ಯಾಸ ಕಂಡಿದ್ರಿಂದ ಆಂಜಿಯೋಗ್ರಾಂ ಪರೀಕ್ಷೆ ಮಾಡಿದಾಗ ಶೇಕಡ 99ರಷ್ಟು ಹಾರ್ಟ್ ಬ್ಯಾಕೇಜ್ ಆಗಿದೆ ಅನ್ನೋದು ತಿಳಿಯಿತು ಅಂತಾ ತಿಳಿಸಿದ್ದಾರೆ.

ಈ ಬಗ್ಗೆ ಅರ್ಜನ ಜನ್ಯ ಅವರ ಕುಟುಂಬಸ್ಥರಿಗೆ ತಿಳಿಸಿ, ಆಂಜಿಯೊಪಾಸ್ಟಿ ಚಿಕಿತ್ಸೆ ಮಾಡಲಾಗಿದೆ. ಇದೀಗ ಅವರು ಸಂಪೂರ್ಣವಾಗಿ ಹುಷಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಗ್ಯಾಸ್ ಸ್ಟ್ರಿಕ್, ತಲೆನೋವು, ಎದೆನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ನೀಡಿದಾಗ ಗ್ಯಾಸ್ ಸ್ಟ್ರಿಕ್ ಸಮಸ್ಯೆ ಕಡಿಮೆಯಾಯ್ತು.

ಮಂಗಳವಾರ ರಾತ್ರಿ ಅವರಿಗೆ ಮತ್ತೆ ತಲೆನೋವು, ಎದೆನೋವು ಹಾಗೂ ಬೆನ್ನುನೋವು ಕಾಣಿಸಿಕೊಂಡಿದೆ. ಆಗ ಇಸಿಜಿ ಮಾಡಿದಾಗ ಸಾಕಷ್ಟು ವ್ಯತ್ಯಾಸ ಕಂಡಿದ್ರಿಂದ ಆಂಜಿಯೋಗ್ರಾಂ ಮಾಡಿದ್ದಾರೆ. ಆಗ ಹಾರ್ಟ್ ಬ್ಯಾಕೇಜ ತಿಳಿದು ಚಿಕಿತ್ಸೆ ನೀಡಲಾಗಿದೆ. ಸಧ್ಯ ಅವರು ಫುಲ್ ಆರಾಮಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!