ಪ್ರಜಾಸ್ತ್ರ ಅಪರಾಧ ಸುದ್ದಿ
ಮೈಸೂರು: ಪತಿ ಹಾಗೂ ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಾಮೈದನೇ ಬಾವನನ್ನ ಕೊಲೆ ಮಾಡಿರುವ ಘಟನೆ ಗೌಸಿಯಾ ನಗರದಲ್ಲಿ ನಡೆದಿದೆ. ಮಹಮ್ಮದ್ ಸದಾನ್(27) ಕೊಲೆಯಾದ ವ್ಯಕ್ತಿ. ಬಾಮೈದ ಕದೀರ್ ಕೊಲೆ ಮಾಡಿದ ವ್ಯಕ್ತಿ ಎಂದು ಆರೋಪಿಸಲಾಗಿದೆ.
ಕೊಲೆಯಾದ ಸರಾನ್ ಹಾಗೂ ರೂಬಿಯಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ರು. ಪತಿ, ಪತ್ನಿ ನಡುವೆ ಸದಾ ಜಗಳ ನಡೆಯುತಿತ್ತು. ಅದೆ ರೀತಿ ಭಾನುವಾರ ಜಗಳ ನಡೆದು ಅದು ತಾರಕ್ಕೆ ಹೋಗಿ, ಒಂದು ಕೊಲೆಯೇ ನಡೆದಿದೆ. ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.