ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಎನ್ ಕೌಂಟರ್.. ಬಲಿಯಾದ ಐನಾತಿ ರೌಡಿ ಶೀಟರ್..

392

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಶೂಟೌಟ್ ನಡೆದಿದೆ. ಪೊಲೀಸ್ ಎನ್ ಕೌಂಟರ್ ನಲ್ಲಿ ರೌಡಿ ಶೀಟರ್ ಸ್ಲಂ ಭರತನ ಹತ್ಯೆಯಾಗಿದೆ. ಬೆಳಗ್ಗೆ ಸುಮಾರು 5 ಗಂಟೆ ಟೈಂನಲ್ಲಿ ಹೆಸರುಘಟ್ಟದ ಬಳಿ ಸ್ಲಂ ಭರತ ಇರೋ ಕಾರು ಗುರುತಿಸಲಾಗಿದೆ. ರಾಜಗೋಪಾಲನಗರ ಠಾಣೆ ಇನ್ಸ್ ಪೆಕ್ಟರ್ ಕಾರು ಅಡ್ಡಗಟ್ಟಿದಾಗ ಫೈರ್ ಮಾಡಿದ್ದಾನೆ.

ಸ್ಲಂ ಭರತ ಹಾರಿಸಿದ ಎರಡು ಗುಂಡು ಪೊಲೀಸರ ಕಾರಿಗೆ ತಗುಲಿದರೆ, ಒಂದು ಇನ್ಸ್ ಪೆಕ್ಟರ್ ಹೊಟ್ಟೆಗೆ ತಗುಲಿದೆ. ಆದ್ರೆ, ಇನ್ಸ್ ಪೆಕ್ಟರ್ ಬುಲೆಟ್ ಪ್ರೊಫ್ ಜಾಕೇಟ್ ಹಾಕಿದ್ರಿಂದ ಸಮಸ್ಯೆಯಾಗಿಲ್ಲ. ಬಳಿಕ ಪೊಲೀಸ್ರು ಸ್ಲಂ ಭರತನ ಮೇಲೆ ಗುಂಡು ಹಾರಿಸಿದ್ದಾರೆ. ಸ್ಥಳದಲ್ಲಿ ಕುಸಿದ ಬಿದ್ದ ಅವನನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಚಿಕಿತ್ಸೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.

ತಲೆ ಮರೆಸಿಕೊಂಡು ಉತ್ತರ ಪ್ರದೇಶದಲ್ಲಿದ್ದ ಸ್ಲಂ ಭರತನನ್ನ ಬೆಂಗಳೂರಿಗೆ ಕರೆದುಕೊಂಡು ಬರುವಾಗ, ಈತನ ಸಹಚರರು ಪೊಲೀಸ್ರ ಮೇಲೆ ಫೈರಿಂಗ್ ನಡೆಸಿದ್ರು. ಈ ವೇಳೆ ಈತ ಎಸ್ಕೇಪ್ ಆಗಿದ್ದ. ಇಂದು ಬೆಳಗ್ಗೆ ಹೆಣವಾಗಿ ಹೋಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!