ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಖ್ಯಾತ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಭಾನುವಾರ ನಿಧನರಾದರು. ಪ್ರಧಾನಿ ಮೋದಿಯಿಂದ ಹಿಡಿದು ವಿವಿಧ ಗಣ್ಯರು ಅವರ ಅಂತಿಮ ದರ್ಶನ ಪಡೆದರು. ಬಾಲಿವುಡ್ ಮಂದಿ ಲತಾ ದೀದಿ ನೆನೆದು ಕಣ್ಣೀರು ಹಾಕಿದರು.
ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ಪಡೆದ ನಟ ಶಾರೂಖ್ ಖಾನ್ ಹಾಗೂ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರ ಫೋಟೋ ವೈರಲ್ ಆಗಿದ್ದು, ಜಾತ್ಯಾತೀತ ಭಾರತ ಅಂದರೆ ಇಷ್ಟೆ. ಇಲ್ಲಿ ಎಲ್ಲರೂ ಕೂಡಿಕೊಂಡು ಹೋಗುವುದು ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಶಾರೂಖ್ ದುವಾ ಮಾಡಿದ್ದಾರೆ. ಪೂಜಾ ದದ್ಲಾನಿ ಕೈಮುಗಿದು ಪ್ರಾರ್ಥಿಸಿದ್ದಾರೆ. ನಂತರ ಶಾರೂಖ್ ಸಹ ಕೈಮುಗಿದು ಒಂದು ಸುತ್ತು ಹಾಕಿ ನಮಸ್ಕರಿಸಿದ್ದಾರೆ.
ಲತಾ ಮಂಗೇಶ್ಕರ್ ಅವರು ಬದುಕಿದ್ದಾಗಲೂ ಜನರನ್ನು ಒಂದುಗೂಡಿಸಲು ನೋಡಿದರು. ನಿಧನದ ನಂತರವೂ ದೇಶದ ಜನರನ್ನೂ ಒಂದುಗೂಡಿಸಲು ಕೆಲಸ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.