ಪ್ರಜಾಸ್ತ್ರ ಸುದ್ದಿ
ವಿಜಯಪುರ: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ರಾಜ್ಯದ ಉಳಿದ 14 ಕ್ಷೇತ್ರಗಳಿಗೆ ನಡೆಯುತ್ತಿದೆ. ಮುಂಜಾನೆ 7ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸೂರ್ಯನ ಕಡುತಾಪದ ನಡುವೆ ಎಷ್ಟು ಪ್ರಮಾಣದಲ್ಲಿ ಮತದಾನ ಆಗುತ್ತೆ ಎನ್ನುವ ಕುತೂಹಲವಿದೆ.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಜನರು ರಣಬಿಸಿಲಿನಿಂದ ಹೈರಾಣಾಗಿದ್ದಾರೆ. ಮುಂಜಾನೆ 9ಗಂಟೆಯಾದರೆ ಸಾಕು ಸೂರ್ಯನ ಕಡತಾಪ ಶುರುವಾಗುತ್ತೆ. ಮಾಧ್ಯಹ್ನ ಇನ್ನು ಹೆಚ್ಚಾಗಿ ಸಂಜೆ 6.30ರ ಸಮಯವಾದ ಸೂರ್ಯ ಮರೆಯಾಗಿರುವುದಿಲ್ಲ. ಹೀಗಾಗಿ ಸಂಜೆ 6ಗಂಟೆಯವರೆಗೆ ಎಷ್ಟು ಪ್ರಮಾಣದಲ್ಲಿ ಮತದಾನವಾಗುತ್ತೆ ಎನ್ನುವುದು ಮುಖ್ಯವಾಗಿದೆ.