ಕೋಲಾರ ಮೂಲದ ಯೋಧ ಹುತಾತ್ಮ

317

ಕೋಲಾರ: ಬಂಗಾರಪೇಟೆಯ ಕಣಿಂಬಲೆ ಗ್ರಾಮದ ಯೋಧ 25 ವರ್ಷದ ಪ್ರಶಾಂತ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದ ರಜೋರಿ ಪ್ರದೇಶದಲ್ಲಿ ಪ್ರಶಾಂತ ಮೃತಪಟ್ಟಿದ್ದು, ಇಂದು ಅಥವ ನಾಳೆ ಸ್ವಗ್ರಾಮಕ್ಕೆ ಪ್ರಾರ್ಥಿವ ಶರೀರ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.

ಮದ್ರಾಸ್ ಎಂಆರ್ ಸಿ ಬಟಾಲಿಯನ್ 17ರಲ್ಲಿ ಪ್ರಶಾಂತ ಸೇವೆ ಸಲ್ಲಿಸ್ತಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಇಂದು ಸಂಜೆ ಅಥವ ನಾಳೆ ಮೃತದೇಹವನ್ನ ಹಸ್ತಾಂತರಿಸಲಾಗ್ತಿದೆ. ಮಗನ ಸಾವಿನ ಸುದ್ದಿ ತಿಳಿದು ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.




Leave a Reply

Your email address will not be published. Required fields are marked *

error: Content is protected !!