ಪ್ರಜಾಸ್ತ್ರ ಸುದ್ದಿ
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸೋಮವಾರ ಬಿ ಫಾರಂ ವಿತರಣೆ ಮಾಡಲಾಗಿದೆ. ಬಿಜೆಪಿ ನಾಯಕರು ಅರಮನೆಯಲ್ಲಿ ಬಿ ಫಾರಂ ನೀಡಿದರು.
ಏಪ್ರಿಲ್ 3ರಂದು ಯದುವೀರ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಶಾಸಕ ಟಿ.ಎಸ್ ಶ್ರೀವತ್ಸ, ಮಾಜಿ ಶಾಸಕರಾದ ರಾಮದಾಸ, ಪ್ರೀತಂಗೌಡ, ಪರಿಷತ್ ಮಾಜಿ ಸದಸ್ಯ ಬಿ.ಸಿದ್ದರಾಜು, ತಾಯಿ ಪ್ರಮೋದಾದೇವಿ ಸೇರಿ ಇತರರು ಹಾಜರಿದ್ದರು.