ಜಾಹೀರಾತುವೊಂದರಲ್ಲಿ ಮರಾಠಿಗರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟ ಅಕ್ಷಯಕುಮಾರ ವಿರುದ್ಧ ಕೇಸ್ ದಾಖಲಿಸಲು ಮರಾಠ ಸಂಘಟನೆಯೊಂದು ಪೊಲೀಸ್ರಿಗೆ ಮನವಿ ಮಾಡಿದೆ.
ಬಟ್ಟೆ ಸೋಪ್ ಕುರಿತ ಜಾಹೀರಾತಿನಲ್ಲಿ ಮರಾಠ ಸೈನಿಕರನ್ನ ಅವಮಾನಿಸುವ ರೀತಿಯಲ್ಲಿದೆ. ಹೀಗಾಗಿ ನಟನ ವಿರುದ್ಧ ಕೇಸ್ ದಾಖಲಿಸುವಂತೆ ಸಂಭಾಜಿ ಬ್ರಿಗೇಡ್ ನಿಂದ ನಾಂದೇಡ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ನಾವು ಸಂಭಾಜಿ ಬ್ರಿಗೇಡ್ ನಿಂದ ದೂರನ್ನ ಸ್ವೀಕರಿಸಿದ್ದೇವೆ. ಸಮುದಾಯದ ಭಾವನೆಗೆ ನೋವುಂಟು ಮಾಡಿರುವ ನಟ ಅಕ್ಷಯಕುಮಾರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗಿದೆ. ಮನವಿ ಪತ್ರವನ್ನ ಅಧೀಕ್ಷರ ಕಚೇರಿಗೆ ಕಳಿಸಿಕೊಟ್ಟಿದ್ದೇವೆ ಎಂದು ವಝಿರ್ ಬಾದ್ ಪೊಲೀಸ್ ಠಾಣೆ ಉಸ್ತುವಾರಿ ಎಸ್ಎಸ್ ಶಿವಾಲೆ ಹೇಳಿದ್ದಾರೆ.