ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಬೈಕ್ ಅಪಘಾತದಿಂದಾಗಿ ಅಕಾಲಿಕ ಮರಣ ಹೊಂದಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯಗೆ, ಅಮೆರಿಕ ರಾಯಭಾರಿ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಅದ್ಭುತ ನಟ ಇಂದು ಭೌತಕವಾಗಿ ಇಲ್ಲದೆ ಇರೋದು ನಿಜಕ್ಕೂ ನೋವಿನ ಸಂಗತಿ.
ಇನ್ನು ಸಂಚಾರಿ ವಿಜಯ ಕುಟುಂಬದವರು ನಿರ್ಧರಿಸಿದಂತೆ ಅವರ ಅಂಗಾಂಗಳನ್ನ ದಾನ ಮಾಡಲಾಗಿದೆ. ಈ ಮೂಲಕ ಇಂತಹ ನೋವಿನಲ್ಲಿ ಹೃದಯ ವೈಶಾಲ್ಯತೆ ಮೆರೆಯಲಾಗಿದೆ. ಎಂ.ಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರು ಹೇಳಿರುವ ಪ್ರಕಾರ, ಇಬ್ಬರಿಗೆ ಕಿಡ್ನಿ, ಇಬ್ಬರಿಗೆ ಕಣ್ಣು ಹಾಗೂ ಒಬ್ಬರಿಗೆ ಲಿವರ್ ಕಸಿ ಮಾಡಲಾಗಿದೆ. ಈ ಮೂಲಕ ನಟ ಸಂಚಾರಿ ವಿಜಯ 5 ಜನರ ಮೂಲಕ ಜೀವಂತವಾಗಿದ್ದಾರೆ ಎಂದಿದ್ದಾರೆ.