ಪ್ರಜಾಸ್ತ್ರ ಸುದ್ದಿ
ಮಂಡ್ಯ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಕಣ್ಣೀರು ಹಾಕಿದ ಬಿ.ಎಸ್ ಯಡಿಯೂರಪ್ಪನವರು ಅದಕ್ಕೆ ಕಾರಣವನ್ನ ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತ್ನಾಡಿದ ಅವರು, ಈ ಹಿಂದೆ ಸಹ ಕಣ್ಣೀರಿನ ಹಿಂದಿನ ಕಾರಣ ಹೇಳಬೇಕು. ಅಂದಿದ್ದೆ. ಈಗ್ಲೂ ಕೇಳುತ್ತಿದ್ದೇನೆ. ರಾಜ್ಯದ ಜನತೆಯ ಮುಂದೆ ಕಣ್ಣೀರಿನ ಹಿನ್ನೆಲೆ ತಿಳಿಸಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.
ನನ್ಗೆ ಮಂತ್ರಿ ಮಾಡಲು ಮಾಡಲು ಬಿಡ್ಲಿಲ್ಲ. ಆಡಳಿತ ಮಾಡಲು ಬಿಡ್ಲಿಲ್ಲ ಎಂದು ಯಡಿಯೂರಪ್ಪ ಹೇಳಿದ್ರು. ಸ್ವಾಮೀಜಿಗಳು ನೋವು ವ್ಯಕ್ತಪಡಿಸಿದ್ರು. ಅದು ಅವರ ಸ್ವಾತಂತ್ರ್ಯ ಅದಕ್ಕೆ ನಾವು ಅಡ್ಡಿ ಬರಲ್ಲ. ಆದ್ರೆ, ಯಡಿಯೂರಪ್ಪ ಕಣ್ಣೀರಿನ ಹಿಂದಿನ ಕಾರಣ ಹೇಳಬೇಕು ಅಂತಾ ಡಿಕೆಶಿ ಒತ್ತಾಯಿಸಿದ್ರು. ಇದೇ ವೇಳೆ ನೂತನ ಸಿಎಂ ಬೊಮ್ಮಾಯಿ ಅವರಿಗೆ ಶುಭ ಕೋರಿದ್ರು.