ನಟಿ ಜ್ಯೋತಿಕಾ ಹೇಳಿಕೆಗೆ ವಿರೋಧ.. ಪತ್ನಿ ಬೆಂಬಲಕ್ಕೆ ನಿಂತ ನಟ ಸೂರ್ಯ

416

ಸೌಥ್ ಸಿನಿ ದುನಿಯಾದ ನಟಿ ಜ್ಯೋತಿಕಾ ದೇವಸ್ಥಾನಗಳ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆ ವಿವಾದ ಎಬ್ಬಿಸಿದೆ. ಹೀಗಾಗಿ ನಟಿ ಅಭಿಮಾನಿಗಳು ಸೇರಿದಂತೆ ವಿವಿಧ ಸಂಘಟನೆಗಳು ಸಹ ಆಕ್ರೋಶ ವ್ಯಕ್ತಪಡಿಸಿವೆ.

ದೇವಸ್ಥಾನಗಳಗೆ ಹಣ ನೀಡುವ ಬದಲು, ಆಸ್ಪತ್ರೆ, ಶಾಲೆ ನಿರ್ಮಾಣಕ್ಕೆ ಬಳಸಿ ಎಂದು ನಟಿ ಜ್ಯೋತಿಕಾ ಹೇಳಿದ್ರು. ಜಸ್ಟ್ ಫಾರ್ ವಿಮೆನ್ ಪ್ರಶಸ್ತಿ ಸಮಾರಂಭದ ವೇಳೆ ಮಾತ್ನಾಡಿದ ನಟಿ ಜ್ಯೋತಿ, ರಚಸಿ ಮೂವಿ ಶೂಟಿಂಗ್ ಗಾಗಿ ತಾಂಜಾವೂರ್ ನಲ್ಲಿ ತಮಗಾದ ಅನುಭವ ಹಂಚಿಕೊಂಡಿದ್ರು. ಪಟ್ಟಣದ ಬೃಹದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಅದನ್ನ ನೋಡಿದ್ರೆ, ಉದಯಪುರದ ಅರಮನೆಯಂತೆ ನಿರ್ಮಾಣ ಮಾಡಲಾಗಿದೆ.

ಮರುದಿನದ ಶೂಟಿಂಗ್ ಆಸ್ಪತ್ರೆಯಲ್ಲಿತ್ತು. ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇದನ್ನ ಹೇಳಲು ಪದಗಳು ಸಾಲದು. ದೇವಸ್ಥಾನಗಳಿಗೆ ಹಣ ವಿನಯೋಗಿಸುವ ಬದಲು, ಆಸ್ಪತ್ರೆ, ಶಾಲೆಗಳಿಗೆ ವಿನಯೋಗಿಸಿ ಎಂದಿದ್ರು. ಇದು ಇದೀಗ ವಿವಾದ ಪಡೆದಿದೆ.

ಚರ್ಚ್, ಮಸೀದಿಗಳಿಗೆ ನೀಡುವ ಹಣದ ಬಗ್ಗೆ ಯಾಕೆ ಮಾತ್ನಾಡುವುದಿಲ್ಲವೆಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪತಿ, ನಟ ಸೂರ್ಯ ಪ್ರತಿಕ್ರಿಯೆ ನೀಡಿದ್ದು, ವಿವೇಕಾನಂದ, ತಿರುಮುಲರ್ ಅವರು ಇದ್ದನ್ನೇ ಹೇಳಿದ್ದಾರೆ. ಇವುಗಳಿಗೆ ಕಿವಿ ಕಿವುಡರಾಗಿದ್ದವರು ಈಗ ಜ್ಯೋತಿಕಾ ಮಾತಿನಲ್ಲಿ ವಿವಾದ ಸೃಷ್ಟಿಸಿದ್ದಾರೆ ಎಂದು ಹೇಳುವ ಮೂಲಕ ಬೆಂಬಲಕ್ಕೆ ನಿಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!