ಪ್ರಜಾಸ್ತ್ರ ಸುದ್ದಿ
ನವದೆಹಲಿ: ಗುತ್ತಿಗೆ ಆಧಾರದ ಮೇಲೆ 4 ವರ್ಷಗಳ ಸೇನಾ ಸೇವೆಗೆ ನೇಮಕ ಮಾಡಿಕೊಳ್ಳುವ ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ದೇಶ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಹಾರ, ಹರಿಯಾಣ, ದೆಹಲಿ ಸೇರಿದಂತೆ ದಕ್ಷಿಣಾ ಭಾರತದ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ.
ಎಲ್ಲೆಡೆ ನೂರಾರು ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ, ಟ್ರೇನ್ ತಡೆದು ಪ್ರತಿಭಟನೆ ನಡೆಸಲಾಗಿದೆ. ಕೆಲವು ಕಡೆ ಆಕ್ರೋಶ ಹೆಚ್ಚಾಗಿ ಹಿಂಸಾಚಾರಕ್ಕೆ ಇಳಿಯಲಾಗಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಇನ್ನು ಬಿಹಾರದ ಸರಣ್ ಜಿಲ್ಲೆಯ ಛಪ್ರಾ ಎಂಬಲ್ಲಿ ಪ್ಯಾಸೆಂಜರ್ ರೈಲುವೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಅರಾ ರೈಲ್ವೆ ನಿಲ್ದಾಣದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಹೀಗೆ ದೇಶದ ಅನೇಕ ಕೇಂದ್ರ ಸರ್ಕಾರದ ಯೋಜನೆ ಖಂಡಿಸಿ ಆಕ್ರೋಶ ವ್ಯಕ್ತವಾಗುತ್ತಿದೆ.