ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಗುಲ್ಟು ಸಿನಿಮಾ ನಿರ್ದೇಶನ ಮಾಡಿ ಸಾಕಷ್ಟು ಭರವಸೆ ಮೂಡಿಸಿರುವ ಜನಾರ್ಧನ್ ಚಿಕ್ಕಣ್ಣ ಇದೀಗ ಮತ್ತೊಂದು ಸಿನಿಮಾ ಮಾಡಿದ್ದಾರೆ. ಮತ್ತೆ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ಬರುತ್ತಿದ್ದು, ಅದುವೇ ಅಜ್ಞಾತವಾಸಿ. ಹೊಸ ತಂಡ ಹೊಸ ಹೊಸ ಕಥೆಗಳನ್ನು ತೆಗೆದುಕೊಂಡು ಜನರ ಎದುರು ಬರಲು ಸಿದ್ಧವಾಗಿದೆ.
ಪಾವನಾ, ಸಿದ್ದು ಮೂಲಿಮನಿ, ರಂಗಾಯಣ ರಘು, ಶರಥ್ ಲೋಹಿತಾಶ್ವ, ರವಿಶಂಕರಗೌಡ ಸೇರಿದಂತೆ ಹಲವರ ತಾರಾ ಬಳಗವಿದೆ. ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಇದ್ದು, ಅದ್ವಿತ್ ಗುರುಮೂರ್ತಿ ಕ್ಯಾಮೆರಾ ಕೈಚಳಕವಿದೆ. ಕೃಷ್ಣ ರಾಜ್ ಕಥೆ ಬರೆದಿದ್ದು, ಹೇಮಂತ್ ಎಂ ರಾವ್, ಪ್ರಚುರ್ ಪಿಪಿ, ಜಯಲಕ್ಷ್ಮಿ ಬಂಡವಾಳ ಹೂಡಿದ್ದಾರೆ.
ಅಜ್ಞಾತವಾಸಿ ಚಿತ್ರತಂಡ ವಿಭಿನ್ನವಾಗಿ ಪ್ರಮೋಷನ್ ನಡೆಸಿದೆ. ಬಿಗ್ ಸ್ಟಾರ್ ಚಿತ್ರಗಳ ನಡುವೆ ಗೆಲ್ಲುವುದು ಹೇಗೆ ಅನ್ನೋ ಹೊಸ ಹಾದಿ ಹಿಡಿದುಕೊಂಡು ಹೊರಟಿದೆ. ಸಧ್ಯ ಟೀಸರ್ ರಿಲೀಸ್ ಮಾಡಿದ್ದು ಶೀಘ್ರದಲ್ಲಿ ಥಿಯೇಟರ್ ಗೆ ಬರಲಿದೆ.