ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಇಂದು ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ ಅವರು 2ನೇ ಪುಣ್ಯಸ್ಮರಣೆ. ಹೀಗಾಗಿ ಪತ್ನಿ ಸುಮಲತಾ ಅಂಬರೀಶ, ಮಗ ಅಭಿಷೇಕ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ರು. ಇನ್ನು ಅಂಬಿ ಆಪ್ತರಾದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಗಣ್ಯರು ಪುಷ್ಪ ನಮನ ಸಲ್ಲಿಸಿದ್ರು.
ಇನ್ನು ಅಂಬರೀಶ ಅಭಿಮಾನಿಗಳು ಸಹ ಸಮಾಧಿ ಬಳಿ ಆಗಮಿಸಿ ಪುಷ್ಪ ನಮನ ಸಲ್ಲಿಸಿದ್ರು. ಇದೆಲ್ಲದರ ನಡುವೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬಿ ಗುಡಿ ನಿರ್ಮಿಸಲಾಗಿದೆ. ಕನ್ನಡ ಚಿತ್ರರಂಗದ ಕರ್ಣನ ಗುಡಿಯನ್ನ ಅಭಿಮಾನಿಗಳು 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಳಗಡೆ 80 ಕೆಜಿ ತೂಕದ ಕಂಚಿನ ಮೂರ್ತಿಯಿದೆ.
ಪತ್ನಿ ಸುಮಲತಾ ಅಂಬರೀಶ, ಮಗ ಅಭಿಷೇಕ, ನಟ ದರ್ಶನ, ರಾಕ್ ಲೈನ್ ವೆಂಕಟೇಶ, ದೊಡ್ಡಣ್ಣ ಸೇರಿದಂತೆ ಅನೇಕರು ಭಾಗವಹಿಸಿ ‘ಅಂಬಿ ಅಮರ’ ಗುಡಿಯನ್ನ ಲೋಕಾರ್ಪಣೆಗೊಳಿಸಲಿದ್ದಾರೆ.