ವಿದೇಶದಲ್ಲಿ ಸಿಎಂ.. ರಾಜ್ಯದಲ್ಲಿ ‘ಕೈ’ ವಿಕೆಟ್ ಪಥನ…

389

ಬೆಂಗಳೂರು: ರಾಜ್ಯ ಮೈತ್ರಿ ಸರ್ಕಾರಕ್ಕೆ ಬಳ್ಳಾರಿ ಜಿಲ್ಲೆಯ ವಿಜಯನಗರ ಶಾಸಕ ಆನಂದ ಸಿಂಗ್ ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕ ಆನಂದ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬೆಂಗಳೂರಿನ ದಮ್ಮಲೂರಿನ ಬಳಿಯಿರುವ ಸ್ಪೀಕರ್ ರಮೇಶಕುಮಾರ ಅವರ ಮನೆಗೆ ತೆರಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದ್ರಿಂದಾಗಿ ಇದೀಗ ದೋಸ್ತಿ ಸರ್ಕಾರದಲ್ಲಿ ಹೈಟೆನ್ಷನ್ ಶುರುವಾಗಿದೆ.

ಶಾಸಕ ಬಿ.ಸಿ ಪಾಟೀಲ, ಜೆ.ಎನ್ ಗಣೇಶ, ಮಹೇಶ ಕುಮಟಳ್ಳಿ ಹಾಗೂ ರಮೇಶ ಜಾರಕಿಹೊಳಿ ಸೇರಿದಂತೆ ಇನ್ನು ಅನೇಕ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಇದು ಬಿಜೆಪಿಯ ಆಪರೇಷನ್ ಕಮಲ ಎನ್ನಲಾಗ್ತಿದೆ. ಅತ್ತ ಸಿಎಂ ವಿದೇಶ ಪ್ರವಾಸದಲ್ಲಿರುವಾಗ್ಲೇ ರಾಜ್ಯ ರಾಜಕಾರಣದಲ್ಲಿ ಬೀರುಗಾಳಿ ಎದ್ದಿದೆ.


TAG


Leave a Reply

Your email address will not be published. Required fields are marked *

error: Content is protected !!