ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಸಲ್ಮಾನ್ ಖಾನ್ ಕಟುಂಬದ ವಿರುದ್ಧ ಆಕ್ರೋಶ ಹೊರ ಹಾಕಿದ್ದ ದಬಾಂಗ್ ಚಿತ್ರದ ನಿರ್ದೇಶಕ ಅಭಿನವ ಕಶ್ಯಪ್ ವಿರುದ್ಧ, ಅರ್ಬಾಜ್ ಖಾನ್ ದೂರು ದಾಖಲು ಮಾಡಿದ್ದಾರೆ. ಸಲ್ಮಾನ್ ಖಾನ್ ಕುಟುಂಬ ನನ್ನನ್ನು ಸರ್ವನಾಶ ಮಾಡಿದ ಎಂದಿದ್ದ ಅಭಿನವ ಕಶ್ಯಪ್ ವಿರುದ್ಧ, ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಲಾಗಿದೆ.
ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಬಳಿಕ, ಬಾಲಿವುಡ್ ನ ಸ್ವಜನಪಕ್ಷಪಾತದ ಕುರಿತು ಹಲವಾರು ಮಂದಿ ಮಾತ್ನಾಡಿದ್ರು. ತಮ್ಮ ಅಭಿಪ್ರಾಯಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಅದರಂತೆ ದಬಾಂಗ್ ನಿರ್ದೇಶಕ ಅಭಿನವ ಕಶ್ಯಪ್, ಸಲ್ಲು ಕುಟುಂಬ ಕಳೆದ 10 ವರ್ಷಗಳಿಂದ ನನ್ಗೆ ಮಾನಸಿಕ ಕಿರುಕುಳ ನೀಡಿದೆ. ಇದರಿಂದ ಸಮಸ್ಯೆ ಎದುರಿಸಿದ್ದೇನೆ ಎಂದಿದ್ರು.
ಕಶ್ಯಪ್ ನೀಡಿರುವ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ನಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ನಮ್ಮ ಘನತೆಯನ್ನ ಹಾಳಲು ಮಾಡಲು ಹೊರಟಿದ್ರು. ಕೇಸ್ ಮಾಡದೆ ನಮ್ಗೆ ದಾರಿಯಿರಲಿಲ್ಲವೆಂದು ಅರ್ಬಾಜ್ ಖಾನ್ ಹೇಳಿದ್ದಾರೆ. ಈ ಬಗ್ಗೆ ಸಲ್ಲು ತಂದೆ ಸಲೀಂ ಖಾನ್ ಮಾತ್ನಾಡಿದ್ದು, ನಾನು 40ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿದ್ದೇನೆ. ನನ್ನದೆ ಗೌರವ ಇದೆ. ಇದರಲ್ಲಿ ನನ್ನನ್ನು ಎಳೆದು ತಂದಿರುವುದು ಎಷ್ಟು ಸರಿ ಎಂದು ಕೇಳಿದ್ದಾರೆ.
ಒಟ್ಟಿನಲ್ಲಿ ಬಾಲಿವುಡ್ ದುನಿಯಾದಲ್ಲಿ ಇದೀಗ ನೆಪೋಟಿಸಂ ಭರ್ಜರಿಯಾಗಿ ಸೌಂಡ್ ಮಾಡುವುದರ ಜೊತೆಗೆ ಹಲವರ ವಿರುದ್ಧ ದೂರು, ಪ್ರತಿದೂರು ದಾಖಲಿಸುವ ಮಟ್ಟಕ್ಕೆ ಬಂದಿದೆ. ಆದ್ರೆ, ಸ್ವಜನಪಕ್ಷಪಾತ ಇಲ್ಲವೆಂದು ಹೇಳುವುದು ಕಷ್ಟಸಾಧ್ಯ.