ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕದ್ದವರ ಬಂಧನ

210

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ ತಂಡದ ಕಿಟ್ ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆಲುವರಾಜ್ ಹಾಗೂ ಸುಧಾಂಶ್ ಕುಮಾರ್ ಬಂಧಿತ ಆರೋಪಿಗಳು.

10 ದಿನಗಳ ಹಿಂದೆ ಆರ್ ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಪಂದ್ಯ ಮುಗಿದ ಬಳಿಕ ಡಿಸಿ ತಂಡ ಮುಂದಿನ ಪಂದ್ಯಕ್ಕಾಗಿ ದೆಹಲಿಗೆ ಪ್ರಯಾಣ ಬೆಳೆಸಿದೆ. ಕ್ರಿಕೆಟ್ ಆಟಗಾರರ ಕಿಟ್ ಗಳ ಸಾಗಾಟದ ಹೊಣೆ ಹೊತ್ತಿರುವ ಎಕ್ಸ್ ಪ್ರೆಸ್ ಪ್ರೈಟ್ ಸಿಸ್ಟಂ ಕಂಪನಿಯ ಕೆಲಸಗಾರರು ಕ್ರಿಕೆಟ್ ಗಳನ್ನು ಏರ್ ಪೋರ್ಟ್ ಗೆ ಸಾಗಿಸುವ ವೇಳೆ ಕಳ್ಳತನವಾಗಿದೆ.

ದೆಹಲಿ ಆಟಗಾರರು ಪ್ರ್ಯಾಕ್ಟೀಸ್ ವೇಳೆ ಪರಿಶೀಲಿಸಿದಾಗ ತಮ್ಮ ಕಿಟ್ ಗಳು ಬರದೆ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ ದೆಹಲಿ ತಂಡದ ಮ್ಯಾನೇಜರ್ ದೆಹಲಿ ಪೊಲೀಸರಿಗೆ ದೂರು ದಾಖಲಿಸಿದ್ದರು. ನಂತರ ಬೆಂಗಳೂರು ಪೊಲೀಸರನ್ನು ಸಹ ಸಂಪರ್ಕಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು, ಕ್ರಿಕೆಟ್ ಕಿಟ್ ಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಬೇಕಾಗಿದ್ದ ಎಕ್ಸ್ ಪ್ರೆಸ್ ಪ್ರೈಟ್ ಸಿಸ್ಟಂ ಕಂಪನಿಯ ವಾಹನ ಚಾಲಕ ಚೆಲುವರಾಜ್ ಹಾಗೂ ಕೊರಿಯರ್ ಬಾಯ್ ಸುಧಾಂಶು ಕುಮಾರ್ ಕಿಟ್ ಕಳ್ಳತನ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 12 ಬ್ಯಾಟ್, 18 ಬೌಲ್, 4 ಜೊತೆ ಹ್ಯಾಂಡ್ ಗ್ಲೌಸ್, 3 ಜೊತೆ ಪ್ಯಾಡ್, 2 ಜೊತೆ ಹೆಲ್ಮೆಟ್ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!