64 ಲಕ್ಷ ರೂಪಾಯಿ ಕದ್ದವನು ಅಂದರ್

247

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಕಳೆದ ಫೆಬ್ರವರಿ 3ರಂದು ಎಟಿಎಂಗೆ ತುಂಬಬೇಕಾಗಿದ್ದ 64 ಲಕ್ಷ ರೂಪಾಯಿ ಹಣವನ್ನ ತೆಗೆದುಕೊಂಡು ಹೊರಟಿದ್ದ ಚಾಲಕ ಯೋಗೇಶ, ಹಣದ ಸಮೇತ ಎಸ್ಕೇಪ್ ಆಗಿದ್ದ. ಇದೀಗ ಅವನನ್ನ ಮೈಸೂರಿನ ಲಾಡ್ಜ್ ವೊಂದರಲ್ಲಿ ಬಂಧಿಸಲಾಗಿದೆ. ಆದ್ರೆ, ಆತನ ಬಳಿ ಸಧ್ಯ ಸಿಕ್ಕಿದ್ದು 15 ಸಾವಿರ ರೂಪಾಯಿ ಮಾತ್ರ.

ಮಂಡ್ಯ ಮೂಲದ ಯೋಗೇಶ ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಹೀಗಿರುವಾಗ ಎಟಿಎಂಗೆ ಹಣ ತುಂಬಲು ಹೊರಟವನು ಹಣ ತೆಗೆದುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈಗಾಗ್ಲೇ ಮದುವೆಯಾಗಿರುವ ಯೋಗೇಶ, ಮೈಸೂರಿನಲ್ಲಿ ಲಾಡ್ಜ್ ನಲ್ಲಿ ಸಿಕ್ಕಿಬಿದ್ದಾಗ ಅತ್ತೆಯ ಮಗಳ ಜೊತೆ ಇದ್ದನಂತೆ. ಇದೀಗ ಅವನ ಬಳಿ ಸಿಕ್ಕಿರುವುದು ಬರೀ 15 ಸಾವಿರ. ಉಳಿದ ಹಣ ಎಲ್ಲಿಟ್ಟಿದ್ದಾನೆ. ಯಾರಿಗೆ ಕೊಟ್ಟಿದ್ದಾನೆ ಅನ್ನೋದರ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!