ಜೈಲಿಗೆ ಹೋದವರಿಗೇಕೆ ಆಡಂಬರದ ಸ್ವಾಗತ: ಹೆಗ್ಡೆ

405

ಬಳ್ಳಾರಿ: ಭ್ರಷ್ಟಾಚಾರದ ವಿರುದ್ಧ ಹೋರಾಡ್ತಿರುವ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಪರೋಕ್ಷವಾಗಿ ಡಿಕೆ ಶಿವಕುಮಾರಿಗೆ ನೀಡ್ತಿರುವ ಅದ್ಧೂರಿ ಸ್ವಾಗತದ ಬಗ್ಗೆ ವಾಗ್ದಾಳಿ ನಡೆಸಿದ್ರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತ್ನಾಡಿದ ಅವರು, ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ ಅಂತಾ ಹೇಳಿದ್ರು.

ಕೆಲವು ವರ್ಷಗಳ ಹಿಂದೆ ಜೈಲಿಗೆ ಹೋದವರು ಅಂದ್ರೆ ಶಿಕ್ಷೆಗೂ ಮೊದ್ಲೇ ಬಹಿಷ್ಕಾರ ಹಾಕ್ತಿದ್ರು. ಇದೀಗ ನೋಡಿ ಯಾವ ರೀತಿಯ ಸ್ವಾಗತ ಸಿಗ್ತಿದೆ ಅಂತಾ, ಮಾಜಿ ಸಚಿವ ಡಿಕೆ ಶಿವಕುಮಾರ ಸ್ವಾಗತದ ಕುರಿತು ಕಳವಳ ವ್ಯಕ್ತಪಡಿಸಿದ್ರು. ಲೋಕಾಪಲ್ ಬಿಲ್ ಯಾರಿಗೆ ಬೇಕಾಗಿದೆ. ಎಸಿಬಿ ಇದೆ ಎಂದು ಸಮಜಾಯಿಷಿ ಕೊಡ್ತಾರೆ. ಎಸಿಬಿ ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುತ್ತೆ. ಪೊಲೀಸ್ ಇಲಾಖೆ ಮಂತ್ರಿಯ ಅಧೀನದಲ್ಲಿರುತ್ತೆ. ಹೀಗಿರುವಾಗ ಎಸಿಬಿ ಏನು ಮಾಡುತ್ತೆ ಅಂತಾ ಪ್ರಶ್ನೆ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!