ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರು 6ನೇ ವೇತನ ಆಯೋಗದಂತೆ ತಮಗೂ ವೇತನ ನೀಡಬೇಕೆಂದು ಆಗ್ರಹಿಸಿ ಮುಷ್ಕರ ನಡೆಸ್ತಿದ್ದು, ರಾಜ್ಯಾದ್ಯಂತ ಸಾರಿಗೆ ಸೌಲಭ್ಯ ನಿಂತು ಹೋಗಿದೆ. ಇದರ ಪರಿಣಾಮ ಖಾಸಗಿ ಬಸ್ ಗಳ ಸಂಚಾರ ತುಂಬಾ ಜೋರಾಗಿದೆ.
ನಗರದ ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳು ಬಂದು ನಿಂತಿವೆ. ಖಾಸಗಿ ಬಸ್ ಗಳು ಪ್ರಯಾಣಿಕರನ್ನ ಕರೆದುಕೊಂಡು ಹೋಗ್ತಿದ್ದು, ಇಷ್ಟು ದಿನ ಸರ್ಕಾರಿ ಬಸ್ ಗಳು ನಿಲ್ಲುತ್ತಿದ್ದ ಜಾಗದಲ್ಲಿ ಬುಧವಾರ ಖಾಸಗಿ ಬಸ್ ಗಳು ಕಾಣಿಸುತ್ತಿವೆ ಇದರ ಜೊತೆಗೆ ಆಟೋಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿವೆ.