ಪ್ರಜಾಸ್ತ್ರ ಸುದ್ದಿ
ರಾಮನಗರ: ಶನಿವಾರ ಮುಂಜಾನೆ ಕ್ಯಾಂಟರ್ ಹಾಗೂ ಟೆಂಪೋ ಟ್ರಾವೆಲ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಬೆಂಗಳೂರು-ಮೈಸೂರು ದಶಪಥ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಪಾಂಡವಪುರದ ಚಿಕ್ಕಾಡೆ ಗ್ರಾಮದ ಮಹೇಶ್ ಹಾಗೂ ಕೃಷ್ಣ ಮೃತ ದುರ್ದೈವಿಗಳು.
ಗ್ರಾಮದ ಕೆಲವರು ಕೂಡಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರು. ವಾಪಸ್ ಊರಿಗೆ ಬರುವಾಗ ಚನ್ನಪಟ್ಟಣದ ಮುದಗೆರೆ ಹತ್ತಿರ ಟ್ಯಾಂಕರ್ ಹಿಂಬದಿಗೆ ಟೆಂಪೋ ಟ್ರಾವೆಲ್ ವಾಹನ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಟೆಂಪೋ ಚಾಲಕ ಸರಿಯಾಗಿ ನಿದ್ದೆ ಮಾಡದ ಪರಿಣಾಮ ಈ ಅನಾಹುತ ಸಂಭವಿಸಿದೆ ಎನ್ನಲಾಗುತ್ತಿದೆ. ಸುಮಾರು ಒಂದೂವರೆ ಗಂಟೆ ಪ್ರಯಾಣ ಸರಿಯಾಗಿ ಆಗಿದ್ದರೆ ಎಲ್ಲರೂ ಊರಲ್ಲಿ ಇರುತ್ತಿದ್ದರು. ಆದರೆ, ಅಷ್ಟರಲ್ಲಿ ದುರಂತ ನಡೆದಿದೆ.