ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ಹಿಂದಿನಿಂದ ಬಂದ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರೈತರು ಹಾಗೂ ಒಂದು ಹಸು ಸಾವನ್ನಪ್ಪಿದ ಘಟನೆ, ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಹತ್ತಿರ ನಡೆದಿದೆ.
ಹೊಳೆಯಪ್ಪ(48), ರಾಮಣ್ಣ(42) ಮೃತ ರೈತರು. ಇವರು ಹೊಲಕ್ಕೆ ಹೊಡೆದುಕೊಂಡು ಹೊರಟಿದ್ದ ಹಸು ಸಹ ಸಾವನ್ನಪ್ಪಿದೆ. ಅಪಘಾತದ ತೀವ್ರತೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.