ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅತೀ ವೇಗವಾಗಿ ಕಾರು ಚಲಾಯಿಸಿ ಕೊನೆಗೆ ಅದು ನಿಯಂತ್ರಣಕ್ಕೆ ಸಿಗದೆ, ಕಂಬವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 7 ಜನ ಸ್ನೇಹಿತರು ಮೃತಪಟ್ಟಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ. ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ ಪ್ರಕಾಶ ಅವರ ಪುತ್ರ ಕರುಣಾ ಸಾಗರ್ ಸೇರಿ 7 ಜನರು ಸಾವನ್ನಪ್ಪಿದ್ದಾರೆ.
ಆಡಿ ಕ್ಯೂ 3 ಕಾರು ರಸ್ತೆಯ ಪಕ್ಕದ ಕಂಬಕ್ಕೆ ಗುದ್ದಿದೆ. ಇದ್ರಿಂದಾಗಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಮುಂದೆ ಕುಳಿತಿದ್ದ ಮೂವರು ಹಾಗೂ ಹಿಂದೆ ಕುಳಿತಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕರುಣಾಸಾಗರ್ ಮದುವೆಯಾಗಬೇಕಿದ್ದ ಹುಡುಗಿ ಬಿಂದು ಸಹ ಮೃತಪಟ್ಟಿದ್ದಾರೆ. ಇಶಿತಾ, ಡಾ.ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಇತರೆ ಮೃತರು ಎಂದು ತಿಳಿದು ಬಂದಿದೆ.
ರಾತ್ರಿ ಸುಮಾರು 1.30ರ ಸಮಯದಲ್ಲಿ ಈ ಅನಾಹುತ ನಡೆದಿದೆ ಎನ್ನಲಾಗ್ತಿದೆ. ರಾತ್ರಿ ವೇಳೆ ವಾಹನಗಳ ಸಂಚಾರ ಕಡಿಮೆ ಇದ್ರಿಂದ, ಕಾರನ್ನ ಅತಿ ವೇಗವಾಗಿ ಚಲಾಯಿಸಿದ್ದಾರೆ ಹಾಗೂ ಕುಡಿದಿದ್ರು ಎನ್ನಲಾಗ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗ್ತಿದೆ.