ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕರು ಸದನದಲ್ಲಿ ದೊಡ್ಡ ಗದ್ದಲವನ್ನೆ ಎಬ್ಬಿಸಿದ್ದಾರೆ. ಪ್ರಕರಣವನ್ನು ಸಮರ್ಥನೆ ಮಾಡಿಕೊಳ್ಳಲು ಆಗದ ಸಿಎಂ ಆದಿಯಾಗಿ ಸಚಿವರೆಲ್ಲ ವಿಪಕ್ಷದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದರ ನಡುವೆ ಆರೋಗ್ಯ ಸಚಿವ ಡಾ.ಕೆ ಸುಧಾಕರ 225 ಜನರ ನೈತಿಕತೆ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ನಲ್ಲಿರುವವರೆಲ್ಲ ಏಕ ಪತ್ನಿ ವ್ರತಸ್ಥರಾ ಎಂದು ಕೇಳಿದ್ದಾರೆ. ಯಾರಿಗೂ ಅನೈತಿಕ ಸಂಬಂಧ ಇಲ್ಲವೆ? ಎಲ್ಲರೂ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರರಾ ಎಂದು ಪ್ರಶ್ನಿಸುವ ಮೂಲಕ ತಮ್ಮನ್ನು ಸೇರಿದದಂತೆ ಎಲ್ಲರ ಬಗ್ಗೆಯೂ ತನಿಖೆಯಾಗಲಿ ಎಂದಿದ್ದಾರೆ.