ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೆಸರು ತಳುಕು ಹಾಕಿಕೊಂಡಿದೆ. ಇದ್ರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ನಡೆದಿದೆ. ಇದರ ನಡುವೆ ಬೆಳಗಾವಿ ಲೋಕಸಭೆ ಉಪ ಚುನಾವಣೆ ಸಂಬಂಧ ಪ್ರಚಾರಕ್ಕೆ ಬಂದಿರುವ ಡಿ.ಕೆ ಶಿವಕುಮಾರ, ಸಿಡಿ ಪ್ರಕರಣದ ಬಗ್ಗೆ ನನಗೆ ಏನೂ ಕೇಳಬೇಡಿ ಎಂದಿದ್ದಾರೆ.
ಮೊದಲು ಉಪ ಚುನಾವಣೆ ನೋಡೋಣ. ಚುನಾವಣೆ ಬಳಿಕ ಸಿಡಿ ಪ್ರಕರಣದ ಬಗ್ಗ ನೋಡಿದರಾಯ್ತು. ಈ ಬಗ್ಗೆ ನನ್ಗೆ ಏನೂ ಕೇಳಬೇಡಿ. ನಾನು ಏನು ಮಾತ್ನಾಡುವುದಿಲ್ಲ. ಕಾನೂನು ಇದೆ. ಕೋರ್ಟ್ ಇದೆ ಎಂದು ಹೇಳಿದ್ದಾರೆ.