ಪ್ರಜಾಸ್ತ್ರ ಸುದ್ದಿ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಸಲ್ಲಿಸಿದ್ದಿ ನಿರೀಕ್ಷಣಾ ಜಾಮೀನು ಅರ್ಜಿಯನ್ನ ವಜಾಗೊಳಿಸಲಾಗಿದೆ. ಹೀಗಾಗಿ ನಾಸಿಕ್ ಪೊಲೀಸರು ಕೇಂದ್ರ ಸಚಿವರ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ.
ರತ್ನಗಿರಿ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನ ತಿರಸ್ಕರಿಸಿದೆ. ಹೀಗಾಗಿ ಮಂಗಳವಾರ ಬಂಧನ ವಾರೆಂಟ್ ನೀಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಯಾವ ವರ್ಷ ಎಂದು ತಿಳಿಯದ ಉದ್ಧವ್ ಠಾಕ್ರೆ ಕಾಪಾಳಕ್ಕೆ ಬಾರಿಸುತ್ತಿದ್ದೆ ಎಂದಿದ್ರು. ಇದನ್ನ ಅವರು ಸಮರ್ಥಿಸಿಕೊಂಡಿದ್ದಾರೆ.
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಸಂದರ್ಭದಲ್ಲಿ ಸಿಎಂ ಠಾಕ್ರೆ ಮಾಡಿದ ಭಾಷಣದ ವೇಳೆ, ಸ್ವಾತಂತ್ರ್ಯ ಸಿಕ್ಕ ವರ್ಷವನ್ನ ಪಕ್ಕದವರಿಗೆ ಕೇಳಿದ್ರು. ಇದನ್ನ ಉಲ್ಲೇಖಿಸಿ ಠಾಣಾ ಸೋಮವಾರ ಹೇಳಿಕೆ ನೀಡಿದ್ರು.