ಚಾಮರಾಜನಗರದಲ್ಲಿ 24 ಅಲ್ಲ, 34 ಜನರ ಸಾವು: ಶಾಸಕ ಪುಟ್ಟರಂಗಶೆಟ್ಟಿ

214

ಪ್ರಜಾಸ್ತ್ರ ಸುದ್ದಿ

ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 24 ಜನರ ಸಾವನ್ನಪ್ಪಿರುವುದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ. ಆದ್ರೆ, ವಾಸ್ತವದಲ್ಲಿ 24 ಅಲ್ಲ, 34 ಜನರು ಸಾವನ್ನಪ್ಪಿದ್ದಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತ್ನಾಡಿದ ಅವರು, ವೈದ್ಯರು, ಅಧಿಕಾರಿಗಳು, ಸಚಿವರು ಸುಳ್ಳು ಹೇಳುತ್ತಿದ್ದಾರೆ. ಮೃತರ ಪಟ್ಟಿಯಲ್ಲಿ 24 ಜನರ ಹೆಸರು ಮಾತ್ರ ಸೇರಿಸಿದ್ದಾರೆ. ಆದ್ರೆ, ಸಾವನ್ನಪ್ಪಿದ್ದು 34 ಜನರು. ಇನ್ನು 10 ಜನರ ಮಾಹಿತಿ ನನ್ಗೆ ಬಂದಿದೆ ಎಂದಿದ್ದಾರೆ.

ಆಕ್ಸಿಜನ್ ಕೊರತೆಯಿಂದ 3 ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಅಂತಾ ಆರೋಗ್ಯ ಸಚಿವ ಡಾ.ಕೆ ಸುಧಾಕರ ಹೇಳ್ತಿದ್ದಾರೆ. ಈ ಮೂಲಕ ದಿಕ್ಕು ತಪ್ಪಿಸುವ ಕೆಲಸವಾಗ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!