ಪ್ರಜಾಸ್ತ್ರ ಸುದ್ದಿ
ರಾಮನಗರ: ಮಾಗಡಿಯ ಚಿಲುಮೆ ಮಠದ ಸ್ವಾಮೀಜಿ ಶವ ಪತ್ತೆಯಾಗಿದೆ. ಮಠದ ಆವರಣದಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಬಸವಲಿಂಗ ಸ್ವಾಮೀಜಿಗಳ ಶವ ಪತ್ತೆಯಾಗಿದ್ದು, ಭಕ್ತಾಧಿಗಳು ಸೇರಿದಂತೆ ಎಲ್ಲರ ಸಾಕಷ್ಟು ಅನುಮಾನ ಮೂಡಿಸಿದೆ.
ರಾಮನಗರ ಜಿಲ್ಲೆ ಮಾಗಡಿಯ ಸೋಲುರು ಹತ್ತಿರದಲ್ಲಿರುವ ಮಠದಲ್ಲಿ ಶ್ರೀಗಳು ಶವ ಪತ್ತೆಯಾಗಿದೆ. ಕುದೂರು ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿವಿಧ ಮಠಗಳ ಮಠಾಧೀಶರು ಬಂದಿದ್ದು, ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.