ಚಂದ್ರು ಸಾವಿನ ತನಿಖಾ ವರದಿ ಬಂದ ಬಳಿಕ ತೀರ್ಮಾನ: ಸಿಎಂ ಬೊಮ್ಮಾಯಿ

128

ಪ್ರಜಾಸ್ತ್ರ ಸುದ್ದಿ

ಹೊನ್ನಳ್ಳಿ: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರು ಸಾವಿನ ಹಿನ್ನೆಲೆಯಲ್ಲಿ, ಸಿಎಂ ಬೊಮ್ಮಾಯಿ ಬುಧವಾರ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ವೇಳೆ ಮಾತನಾಡಿದ ಅವರು, ಪ್ರಕರಣದ ತನಿಖಾ ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಮರಣೋತ್ತರ ಪರೀಕ್ಷಾ ವರದಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ಮರುಸೃಷ್ಟಿ ತನಿಖಾ ವರದಿ ಸೇರಿ ಎಲ್ಲ ಆಯಾಮಗಳಲ್ಲಿ ನಡೆದ ತನಿಖಾ ವರದಿ ಬಂದ ನಂತರ ಮುಂದಿನ ನಿರ್ಧಾರ. ಅಲ್ಲಿಯವರೆಗೂ ಅಧಿಕಾರಿಗಳು ಯಾವುದೇ ನಿರ್ಧಾರಕ್ಕೆ ಬರಬಾರದು ಅಂತಾ ಹೇಳಿದರು.

ರೇಣುಕಾಚಾರ್ಯ ನನ್ನ ಸಹೋದರನಿದ್ದಂತೆ. ಸಿಎಂ ಆಗಿ ನಾನು ಇಲ್ಲಿ ಬಂದಿಲ್ಲ. ಸಹೋದರನ ಮಗ ತೀರಿಕೊಂಡ ದುಃಖದಲ್ಲಿ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.




Leave a Reply

Your email address will not be published. Required fields are marked *

error: Content is protected !!