ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿದೆ. ಸ್ವತಃ ಯಡಿಯೂರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ದೆಹಲಿಗೆ ಹೋಗಿದ್ದ ವಿಜಯೇಂದ್ರ ಹತ್ತಿರ ಹೈಕಮಾಂಡ್ ಯಡಿಯೂರಪ್ಪ ರಾಜೀನಾಮೆ ನೀಡುವ ಸೂಚನೆ ಬಂದಿದೆ ಎನ್ನಲಾಗ್ತಿದೆ.
ಇತ್ತೀಚೆಗೆ ವಿಜಯೇಂದ್ರ ದೆಹಲಿಗೆ ತೆರಳಿದ್ರು. ಆ ವೇಳೆ ಸಾಕಷ್ಟು ಊಹಾಪೋಹ ಎದಿದ್ವು. ಇದೀಗ ಸ್ವತಃ ಸಿಎಂ ರಾಜೀನಾಮೆ ವಿಷಯ ಹೇಳಿದ್ದಾರೆ ಎನ್ನಲಾಗ್ತಿದೆ. ನಾನು ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರಂತೆ. ಇದ್ರಿಂದಾಗಿ ಭಿನ್ನರ ಟೀಂ ಮೇಲುಗೈ ಸಾಧಿಸಿದೆ ಎಂದು ಹೇಳಲಾಗ್ತಿದೆ.