ದೆಹಲಿಯಲ್ಲಿ ಟ್ರಬಲ್ ಶೂಟರ್ ಕಣ್ಣೀರು

387

ನವದೆಹಲಿ: ಮಾಜಿ ಸಚಿವ, ಕಾಂಗ್ರೆಸ್ ಪಾಳೆಯದಲ್ಲಿ ಟ್ರಬಲ್ ಶೂಟರ್ ಎಂದು ಕರೆಸಿಕೊಳ್ಳುವ ಡಿ.ಕೆ ಶಿವಕುಮಾರ ಅವರು ನವದೆಹಲಿಯಲ್ಲಿ ಕಣ್ಣೀರು ಹಾಕಿದ್ದಾರೆ. ಇಂದು ತಮ್ಮ ಹಿರಿಯರಿಗೆ ಪೂಜೆ ಮಾಡಬೇಕಿತ್ತು. ಆದ್ರೆ, ಇಡಿ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಿಲ್ಲವೆಂದು ಡಿಕೆಶಿ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದಾರೆ.

ನನ್ನ ಮೇಲೆ ನೀವು ನಂಬಿಕೆ ಇಟ್ಟಿರುವುದಕ್ಕೆ ಧನ್ಯವಾದಗಳು.ಇಂದು ನನ್ನ ಹಿರಿಯರಿಗೆ ಎಡೆ ಮಾಡಿಕೊಡದಿರುವುದಕ್ಕೆ ಬೇಸರವಾಗ್ತಿದೆ ಅಂತಾ ಕಣ್ಣೀರು ಹಾಕಿದ್ರು. ಉಪ್ಪು ತಿಂದವರು ನೀರು ಕುಡಿಬೇಕೆಂದು ಉಪ ಮುಖ್ಯಮಂತ್ರಿಯೊಬ್ಬರು ಹೇಳ್ತಿದ್ದಾರೆ. ಆದ್ರೆ, ನಾನು ಜನರಿಗೆ ಮೋಸ ಮಾಡಿಲ್ಲ ಅಂತಾ ಇಡಿ ವಿಚಾರಣೆಗೆ ತೆರಳುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ ಮಾಧ್ಯಮಗಳಿಗೆ ತಿಳಿಸಿದ್ರು.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!