ಬೆಂಗಳೂರು: ಜಂತಕಲ್ ಮೈನಿಂಗ್ ಕಂಪನಿ ಪರವಾನಿಗೆ ನವೀಕರಣ ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದಿಂದ ಮಾಜಿ ಸಿಎಂ ಹೆಸರನ್ನ ಕೈಬಿಟ್ಟು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಜಂತಕಲ್ ಗಣಿಗಾರಿಕೆ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಐಎಎಸ್ ಅಧಿಕಾರಿ ಗಂಗಾರಾಮ ಬಡೇರಿಯಾ ಬಂಧಿಸಿ ವಿಚಾರಣೆ ನಡೆಸಿತ್ತು. ಹೆಚ್ಡಿಕೆ ಸಿಎಂ ಆಗಿದ್ದ ಟೈಂನಲ್ಲಿ ವಿನೋದ ಘೋಯಲ್ ಗೆ ಭೂಮಿ ಮಂಜೂರು ಮಾಡುವಂತೆ ಐಎಎಸ್ ಅಧಿಕಾರಿ ಬಡೇರಿಯಾಗೆ ಆದೇಶಿಸಿದ್ರು ಎಂದು ಮೌಖಿಕವಾಗಿ ತಿಳಿಸಿದ್ರು. ಹೀಗಾಗಿ ಕುಮಾರಸ್ವಾಮಿಯನ್ನ ಎಸ್ಐಟಿ ವಿಚಾರಣೆಗೆ ಒಳಪಡಿಸಿತ್ತು.
ವಿಚಾರಣ ವೇಳೆ ಕುಮಾರಸ್ವಾಮಿ ವಿರುದ್ಧ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಗಂಗಾರಾಮ ಬಡೇರಿಯಾ, ವಿನೋದ ಘೋಯಲ್ ಮೂಲಕ ತನ್ನ ಮಗ ಗಗನ ಅಕೌಂಟ್ ಗೆ ಹಣ ವಾರ್ಗಾವಣೆ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ಇದ್ರಿಂದಾಗಿ ಹೆಚ್ಡಿಕೆ ಹೆಸರು ಕೈ ಬಿಟ್ಟು ಬಡೇರಿಯಾ ಮತ್ತು ಆತನ ಮಗ ಗಗನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.