ಹಬ್ಬದಂದೇ ಜವರಾಯನಾಟಕ್ಕೆ ನಾಲ್ಕು ಬಲಿ

401

ಪುತ್ತೂರು: ಒಂದ್ಕಡೆ ಸಂಭ್ರಮ ಸಡಗರದಿಂದ ಗಣೇಶ ಹಬ್ಬ ಮಾಡಲಾಗ್ತಿದೆ. ಇನ್ನೊಂದು ಕಡೆ ಜವರಾಯ ತನ್ನಾಟ ಆಡಿದ್ದಾನೆ. ಹೀಗಾಗಿ ದಕ್ಷಿಣ ಜಿಲ್ಲೆಯ ಪುತ್ತೂರು ಬಳಿಯ ಮೈಸೂರು ರಾಜ್ಯ ಹದ್ದಾರಿಯಲ್ಲಿ ಭೀಕರ ಕಾರು ಅಪಘಾತಕ್ಕೆ ನಾಲ್ಕು ಜೀವಗಳು ಬಲಿಯಾಗಿವೆ.

ಪುತ್ತೂರಿನ ಕೌಡಿಚಾರಿನ ಬಳಿಯಿರುವ 20 ಅಡಿ ಕೆರೆಯೊಂದಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಕೆಎ 05 ಎಂಎಫ್ 9794 ನಂಬರಿನ ಕಾರು ಬಿದ್ದಿದೆ. ಈ ಒಂದು ಅಪಘಾತದಲ್ಲಿ ಶುಂಠಿಕೊಪ್ಪ ನಿವಾಸಿಗಳಾದ ಅಶೋಕ, ಪತ್ನಿ ಸುಮಲತಾ, ಮಕ್ಕಳಾದ ಯಶಸ್ ಹಾಗೂ ವರ್ಷಾಕುಮಾರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಆಗಮಿಸಿದ ಸಂಪ್ಯ ಠಾಣೆ ಪೊಲೀಸ್ರು, ಅಗ್ನಿಶಾಮಕ ದಳದವರ ಸಹಾಯದಿಂದ ಕಾರನ್ನ ಹೊರ ತೆಗೆದು ಮೃತದೇಹಗಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!