ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಸ್ಟಾರ್ ನಟ ದರ್ಶನ್ ಹಾಗೂ ಯುವ ನಟ ಧ್ರುವನ್ ವಿರುದ್ಧ ನಿರ್ಮಾಪಕರೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣ ಪರಮಾತ್ಮ ಚಿತ್ರದ ನಿರ್ಮಾಪಕ ಭರತ್ ವಿಷ್ಣುಕಾಂತ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭಗವಾನ್ ಶ್ರೀಕೃಷ್ಣ ಪರಮಾತ್ಮ ಚಿತ್ರ ಹಣಕಾಸಿನ ತೊಂದರೆಯಿಂದ ಶೂಟಿಂಗ್ ನಿಲ್ಲಿಸಲಾಗಿತ್ತು. ಈ ಸಂಬಂಧ ನಟ ಧ್ರುವನ್, ದರ್ಶನ್ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ಅಲ್ಲದೇ, ಈ ಚಿತ್ರವನ್ನು ಬೇರೆಯವರು ಮುಂದುವರೆಸುತ್ತಾರೆ ಎಂದಾಗ ಹಣಕಾಸಿನ ವಿಚಾರ ಬಂದಿದೆ. ಅದನ್ನು ಕೊಡುತ್ತೇವೆ ಎಂದು ಹೇಳಿ ಸಹಿ ಮಾಡಿಸಿಕೊಂಡವರು ದುಡ್ಡು ಕೊಟ್ಟಿಲ್ಲವೆಂದು ಹೇಳಲಾಗುತ್ತಿದೆ.
ನನಗೆ ನಟ ದರ್ಶನ್ ಜೀವ ಬೆದರಿಕೆ ಹಾಕಿದ್ದಾರೆ. ನನಗೆ ದುಡ್ಡು ಕೊಡದೆ ಇದೀಗ ಬೇರೆಯವರು ನಿರ್ದೇಶನ ಹಾಗೂ ಡಿ ಬಾಸ್ ಪ್ರಸಂಟ್ ಹೆಸರಿನಲ್ಲಿ ಚಿತ್ರದ ಪೋಸ್ಟರ್ ಬಿಡಲಾಗಿದೆ. ಈ ಬಗ್ಗೆ ನನ್ನ ಬಳಿ ಆಡಿಯೋ ರೆಕಾರ್ಡ್ಸ್ ಇವೆ. ಅದನ್ನು ಕೋರ್ಟಿಗೆ ಕೊಡುತ್ತೇನೆ ಎಂದು ನಿರ್ಮಾಪಕ ಭರತ್ ಹೇಳುತ್ತಿದ್ದಾರೆ. ಕಳೆದೊಂದು ವರ್ಷದಿಂದ ಈ ತಿಕ್ಕಾಟ ನಡೆಯುತ್ತಿದ್ದು, ಇದೀಗ ಹೊರ ಬಂದಿದೆ.
ನಟ ದರ್ಶನ್ ವಿರುದ್ಧ ಎನ್ ಸಿಆರ್ ದಾಖಲಾಗಿದೆ. ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟವರ ಹೇಳಿಕೆ ಪಡೆಯಲಾಗುತ್ತೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.